Advertisement

ಸೆ. 15ರಿಂದ ಡೇವಿಸ್‌ ಕಪ್‌ ಪ್ಲೇ ಆಫ್ ಭಾರತಕ್ಕೆ ಕೆನಡಾ ಎದುರಾಳಿ

03:15 PM Apr 12, 2017 | Harsha Rao |

ಹೊಸದಿಲ್ಲಿ: ಸೆಪ್ಟಂಬರ್‌ 15ರಿಂದ 17ರ ವರೆಗೆ ನಡೆಯಲಿರುವ ಡೇವಿಸ್‌ ಕಪ್‌ ವಿಶ್ವ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಕೆನಡಾ ಸವಾಲನ್ನು ಎದುರಿಸಲಿದೆ. ಇದನ್ನು ಡೇವಿಸ್‌ ಕಪ್‌ ಟ್ವಿಟರ್‌ ಪೇಜ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ ಯಾವ ದೇಶದ ಆತಿಥ್ಯದಲ್ಲಿ ಈ ಟೂರ್ನಿ ನಡೆಯುತ್ತದೆ ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

Advertisement

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಡೇವಿಸ್‌ ಕಪ್‌ ಏಶ್ಯ/ಒಶಿಯಾನಿಯಾದ ಪ್ಲೇ ಆಫ್ ರೌಂಡ್‌ 2ರಲ್ಲಿ ಭಾರತ 4-1ರಿಂದ ಉಜ್ಬೇಕಿಸ್ಥಾನವನ್ನು ಮಣಿಸಿ ವಿಶ್ವ ಗುಂಪಿಗೆ ತೇರ್ಗಡೆಯಾಗಿದೆ. ಯುವ ಆಟಗಾರರಾದ ರಾಮಕುಮಾರ್‌ ರಾಮನಾಥನ್‌, ಪ್ರಜ್ಞೆàಶ್‌ ಗುಣೇಶ್ವರನ್‌, ರೋಹನ್‌ ಬೋಪಣ್ಣ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮಾಜಿ ಆಟಗಾರ ಮಹೇಶ್‌ ಭೂಪತಿ ತಂಡದ ನಾಯಕನಾದ ಬಳಿಕ ಆಡಲಾದ ಮೊದಲ ಪಂದ್ಯಾವಳಿ ಇದಾಗಿತ್ತು. ಆದರೆ ಖ್ಯಾತ ಡಬಲ್ಸ್‌ ಆಟಗಾರ ಲಿಯಾಂಡರ್‌ ಪೇಸ್‌ ಅವರನ್ನು 27 ವರ್ಷಗಳ ಅನಂತರ ತಂಡದಿಂದ ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು.

ಪೇಸ್‌, ಭೂಪತಿ ಪ್ರೌಢರಂತೆ ವರ್ತಿಸಬೇಕು 
ಉಜ್ಬೇಕಿಸ್ಥಾನದ ವಿರುದ್ಧ ಡೇವಿಸ್‌ ಕಪ್‌ ಟೆನಿಸ್‌ ಕೂಟದ ವೇಳೆ ತನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ಲಿಯಾಂಡರ್‌ ಪೇಸ್‌ ಬಹಿರಂಗ ಬೇಸರ ವ್ಯಕ್ತಪಡಿಸಿದ್ದರು. ಬೆನ್ನಲ್ಲೇ ಭಾರತ ಡೇವಿಸ್‌ ಕಪ್‌ ತಂಡದ ಆಟವಾಡದ ನಾಯಕ  ಮಹೇಶ್‌ ಭೂಪತಿ ತಂಡಕ್ಕೆ ಯಾಕೆ ಸೇರಿಸಿಕೊಳ್ಳಲಿಲ್ಲ ಎನ್ನುವುದಕ್ಕೆ ಕಾರಣವನ್ನೂ ನೀಡಿದ್ದರು. ಇಬ್ಬರ ವಾಕ್ಸಮರ ಅಖೀಲ ಭಾರತೀಯ ಟೆನಿಸ್‌ ಸಂಸ್ಥೆಗೆ (ಎಐಟಿಎ) ಮುಜುಗರ ತಂದಿದೆ. ಈ ಕುರಿತಂತೆ ಎಐಟಿಎ ಇಬ್ಬರು ಹಿರಿಯ ಟೆನಿಸಿಗರು ಈ ರೀತಿ ಕಿತ್ತಾಡುವ ಬದಲು ಪ್ರೌಢತೆಯನ್ನು ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next