Advertisement

ಬಿಜೆಪಿಯವರು ಬರೋವರೆಗೂ ರೆಸಾರ್ಟ್‌ ವಾಸ್ತವ್ಯ: ಸಿದ್ದರಾಮಯ್ಯ

12:55 AM Jan 19, 2019 | Team Udayavani |

ಬೆಂಗಳೂರು: “ಹರಿಯಾಣದ ಗುರುಗ್ರಾಮದ ರೆಸಾರ್ಟ್‌ನಲ್ಲಿರುವ ಬಿಜೆಪಿ ಶಾಸಕರು ರಾಜ್ಯಕ್ಕೆ ವಾಪಸ್‌ ಆಗುವವರೆಗೂ ಕಾಂಗ್ರೆಸ್‌ ಶಾಸಕರು ಒಗ್ಗಟ್ಟು ಪ್ರದರ್ಶಿಸಲು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಾಗುತ್ತದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಶಾಸಕಾಂಗ ಪಕ್ಷದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಪರೇಷನ್‌ ಕಮಲ ಮಾಡಲು ಮುಂದಾಗಿರುವುದರಿಂದ ಪಕ್ಷದ ಶಾಸಕರ ಒಗ್ಗಟ್ಟು ತೋರಿಸಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಆಂಗ್ಲೋ ಇಂಡಿಯನ್‌ ಶಾಸಕಿ ಸೇರಿ 76 ಜನ ಶಾಸಕರು ಸಭೆಗೆ ಹಾಜರಾಗಿದ್ದರು. ನಾಲ್ವರು ಗೈರು ಹಾಜರಾಗಿದ್ದು, ಬಳ್ಳಾರಿ ಗ್ರಾಮೀಣ ಶಾಸಕ ಆನಂದ್‌ ಹಾಗೂ ಚಿಂಚೊಳ್ಳಿ ಶಾಸಕ ಉಮೇಶ್‌ ಜಾಧವ್‌ ಗೈರು ಹಾಜರಿ ಬಗ್ಗೆ ಪತ್ರ ಬರೆದಿದ್ದಾರೆ. ಅವರ ಪತ್ರದ ನೈಜತೆಯ ಬಗ್ಗೆಯೂ ಪರಿಶೀಲನೆ ನಡೆಸಿ, ನಾಲ್ವರಿಗೂ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು ಎಂದರು.

ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ 50ರಿಂದ 100 ಕೋಟಿ ರೂ. ಆಮಿಷ ಒಡ್ಡುತ್ತಿದ್ದಾರೆ. ದೇಶದ ಚೌಕಿದಾರ ಅವರಿಗೆ ಇಷ್ಟೊಂದು ದುಡ್ಡು ಎಲ್ಲಿಂದ ಬರುತ್ತಿದೆ. ಕಾಂಗ್ರೆಸ್‌ ಶಾಸಕರಿಗೆ ಆಮಿಷ ನೀಡಿರುವ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಸಿ.ಎಸ್‌.ಶಿವಳ್ಳಿ, ಅನಿಲ್‌ ಚಿಕ್ಕಮಾದು, ಹರಿಹರ ರಾಮಪ್ಪ ಅವರಿಗೆ ಬಿಜೆಪಿಯವರು ಹಣದ ಅಮಿಷ ಒಡ್ಡಿದ್ದರು ಎಂದು ಹೇಳಿದರು.

ಪಕ್ಷಾಂತರ ಕಾಯ್ದೆ ಅತ್ಯಂತ ಕಠಿಣವಾಗಿದೆ. ಹೀಗಾಗಿ ಯಾವ ಶಾಸಕರೂ ಬೇರೆ ಪಕ್ಷದ ಜತೆಗೆ ಹೋಗುವುದಿಲ್ಲ. ಆದರೆ, ಪಕ್ಷದ ಶಾಸಕರು ಒಂದೆಡೆ ಸೇರಿ ಬರಗಾಲ, ಲೋಕಸಭೆ ಚುನಾವಣೆ ಸಿದಟಛಿತೆ ಕುರಿತು ಚರ್ಚಿಸಲು ತೀರ್ಮಾನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ರೆಸಾರ್ಟ್‌ ವಾಸ್ತವ್ಯ ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next