Advertisement

ಸಾಲವನ್ನು ಮರುಪಾವತಿ ಮಾಡಿಸಿಕೊಳ್ಳುವ ಏಜೆಂಟ್‌ ಕಚೇರಿಗಳಿಗೆ ಎಚ್ಚರಿಕೆ ನೀಡಿದ ಆರ್‌ಬಿಐ

09:59 PM Jun 19, 2022 | Team Udayavani |

ನವದೆಹಲಿ: ಸಾಲವನ್ನು ಮರುಪಾವತಿ ಮಾಡಿಸಿಕೊಳ್ಳುವ ಏಜೆಂಟ್‌ ಕಚೇರಿಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಭಾನುವಾರ ಖಡಕ್‌ ಎಚ್ಚರಿಕೆ ಕೊಟ್ಟಿದೆ.

Advertisement

“ಏಜೆಂಟರು ಮಧ್ಯ ರಾತ್ರಿ ವೇಳೆ ಕರೆ ಮಾಡುತ್ತಾರೆ, ಅಸಭ್ಯ ಮಾತುಗಳನ್ನಾಡುತ್ತಾರೆ ಎಂದು ಅನೇಕ ದೂರುಗಳು ಬರುತ್ತಿವೆ. ಈ ರೀತಿ ಮುಂದುವರಿದರೆ ನಾವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈ ರೀತಿ ಬರುವ ದೂರು ಬಂದಲ್ಲಿ, ನಾವು ಯಾವುದೇ ರಿಯಾಯಿತಿ ಕೊಡದೆ, ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸುತ್ತೇವೆ’ ಎಂದು ಆರ್‌ಬಿಐ ತಿಳಿಸಿದೆ.

ಹಾಗೆಯೇ ಈ ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ಸಾಲ ಕೊಡುವ ಬ್ಯಾಂಕುಗಳು ಮತ್ತು ಕಂಪನಿಗಳಿಗೂ ಸೂಚನೆ ಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next