Advertisement

ಪಾಲಕ್ಕಾಡ್‌ ಬೆಟ್ಟದ ಕಣಿವೆಯಲ್ಲಿ ಸಿಲುಕಿದ ಯುವಕ

09:47 PM Feb 08, 2022 | Team Udayavani |

ತಿರುವನಂತಪುರಂ: ಕೇರಳದ ಪಾಲಕ್ಕಾಡಿನ ಎಲಿಚಿರಂನಲ್ಲಿರುವ ಕುರುಂಬಚಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆಂದು ತೆರಳಿದ್ದ ಆರ್‌.ಬಾಬು(23) ಸೋಮವಾರದಿಂದ ಅದೇ ಬೆಟ್ಟದ ಕಣಿವೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾನೆ. ಆತನನ್ನು ರಕ್ಷಿಸಲು ಸಕಲ ಪ್ರಯತ್ನ ನಡೆಸಲಾಗುತ್ತಿದೆ.

Advertisement

ಮೂವರು ಸ್ನೇಹಿತರೊಂದಿಗೆ ಸೋಮವಾರ ಮಧ್ಯಾಹ್ನ ಬೆಟ್ಟಕ್ಕೆ ತೆರಳಿದ್ದ ಬಾಬು ಸಂಜೆ ಬೆಟ್ಟದಿಂದ ಕೆಳಗಿಳಿಯುವಾಗ ಕಾಲು ಜಾರಿ, ಬೆಟ್ಟದ ಸೀಳಿನಲ್ಲಿ ಸಿಲುಕಿಕೊಂಡಿದ್ದಾನೆ.

ಆತನ ಸ್ನೇಹಿತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ರಕ್ಷಣೆಗೆಂದು ವಾಯುಪಡೆಯಿಂದ ಹೆಲಿಕಾಪ್ಟರ್‌ ಅನ್ನೂ ಕರೆಸಲಾಗಿತ್ತಾದರೂ ಆತ ಇದ್ದ ಸ್ಥಳಕ್ಕೆ ಅದು ಹೋಗಲು ಸಾಧ್ಯವಿಲ್ಲವೆಂದು ವಾಪಸು ಕಳುಹಿಸಲಾಗಿದೆ.

ಇದನ್ನೂ ಓದಿ:ಓಪೋ ರೆನೊ 7 ಪ್ರೋ 5ಜಿ ಮಾರುಕಟ್ಟೆಗೆ; ಎರಡು ಬಣ್ಣಗಳ ಆಯ್ಕೆ

ಸೀಳಿನಲ್ಲಿ ಸಿಲುಕಿರುವ ಬಾಬು ಮೊಬೈಲ್‌ ಮೂಲಕ ಸ್ನೇಹಿತರಿಗೆ ಫೋಟೋ ಕಳುಹಿಸಿದ್ದಾನೆ. ಆತನಿಗೆ ಊಟ, ತಿಂಡಿ ಕೊಡಲೂ ಪ್ರಯತ್ನ ನಡೆಯುತ್ತಿದ್ದು, ರಕ್ಷಣೆಗೆಂದು ಪರ್ವತಾರೋಹಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವೂ ಸ್ಥಳಕ್ಕೆ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next