Advertisement

ಉಚಿತ ಬೀಜ-ಗೊಬ್ಬರ ನೀಡಲು ಆಗ್ರಹ

11:05 AM Jun 07, 2022 | Team Udayavani |

ಕಲಬುರಗಿ: ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೃಷಿಗೆ ಭಾರಿ ಉತ್ತೇಜನವೇನೂ ಸಿಕ್ಕಿಲ್ಲ. ಅಲ್ಲದೆ, ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿಲ್ಲ, ಸರಕಾರದ ಬೆಂಬಲ ಬೆಲೆಯೂ ಅಷ್ಟಕಷ್ಟೆ. ಆದ್ದರಿಂದ ಪ್ರಸಕ್ತ ಮುಂಗಾರಿನಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರವನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಖೀಲ ಭಾರತ ಕಿಸಾನ್‌ ಸಭಾ ಸದಸ್ಯರು ಪ್ರತಿಭಟನೆ ಮಾಡಿದರು.

Advertisement

ರೈತ ವಿರೋಧಿಯಾಗಿರುವ ಮೂರು ಕರಾಳ ಕಾಯಿದೆಗಳನ್ನು ಕೂಡ ಕೈ ಬಿಡಬೇಕು. ಎಲ್ಲ ಬೆಳೆಗೆ ವೈಜ್ಜಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು, ಎಲ್ಲ ನೀರಾವರಿ ಯೋಜನೆಗಳನ್ನು ಕಾಲ ಮಿತಿಯಲ್ಲಿ ಅರಂಭಿಸಬೇಕು, ರೈತರ ಪಂಪ್‌ ಸೆಟ್‌ಗಳಲ್ಲಿ ಹಗಲಿನಲ್ಲಿ 12 ಗಂಟೆ ನಿರಂತರವಾಗಿ ವಿದ್ಯುತ್‌ ಒದಗಿಸಬೇಕು. 60 ವರ್ಷ ಮೇಲ್ಪಟ್ಟಿರುವ ರೈತರಿಗೆ ಮಾಸಿಕ 5000 ಪಿಂಚಣಿ ಕೊಡಬೇಕು, ಉದ್ಯೋಗ ಖಾತ್ರ ಅಡಿಯಲ್ಲಿ 250 ದಿನ ಕಾಯಾಂ ಉದ್ಯೋಗ ನೀಡಬೇಕು, ರೈತರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಗ್ರಾಮೀಣ ಮಟ್ಟದಲ್ಲಿ ರಸ್ತೆಗಳ ಸುಧಾರಣೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೆಚ್ಚು ಸಾಲ ಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆಯಲ್ಲಿ ಜಿಲ್ಲಾಧ್ಯಕ್ಷ ಮೌಲಾಮುಲ್ಲಾ, ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಮಲ್ಲಿಕಾರ್ಜುನ ದೊಡ್ಡಮನಿ, ಭೀಮರಾಯ ಮುದಬಸಪ್ಪಗೋಳ್‌, ಚಂದ್ರಕಾಂತ ಖೂಬ್ರೆ, ಮಹಾನಂದ ನಾಡಗೌಡ, ಲಕ್ಷ್ಮಿ ದೊಡ್ಡಮನಿ, ಜನಾಬಾಯಿ ವಗ್ಗೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next