Advertisement

20 ಕ್ವಿಂಟಲ್‌ ಉದ್ದು-ಹೆಸರು ಖರೀದಿಸಲು ಆಗ್ರಹ

02:13 PM Oct 02, 2019 | Team Udayavani |

ಬೀದರ: ಉದ್ದು, ಹೆಸರು ಖರೀದಿಗೆ ಸರ್ಕಾರ ನಿಯಮ ಹಾಕಿರುವುದುನ್ನು ಕೈಬಿಡಬೇಕು ಎಂದು ಒತ್ತಾಯಿಸಿ ನಗರದ ಜಿಪಂ ಕಚೇರಿ ಎದುರಿನ ಮುಖ್ಯ ರಸ್ತೆ ಬಂದ್‌ ಮಾಡಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಸರ್ಕಾರಗಳು ರೈತರೊಂದಿಗೆ ಚಲ್ಲಾಟವಾಡುತ್ತಿವೆ. ಕೇವಲ ನಾಲ್ಕು ಕ್ವಿಂಟಲ್‌ ಹೆಸರು ಖರೀದಿಸುವುದಾಗಿ ಹೇಳುತ್ತಿರುವ ಸರ್ಕಾರಗಳು ರೈತ ವಿರೋಧಿ ಯಾಗಿವೆ. ಸರ್ಕಾರ ರೈತರು ಬೆಳೆಸಿದ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ದೊಡ್ಡ ಮಟ್ಟದ ಪ್ರಚಾರ ಪಡೆಯುತ್ತಿದೆ. ಆದರೆ, ವಾಸ್ತವದಲ್ಲಿ ಅದು ರೈತರಿಗೆ ವರವಾಗುತ್ತಿಲ್ಲ. ಒಬ್ಬ ರೈತ ಕೇವಲ ನಾಲ್ಕು ಕ್ವಿಂಟಲ್‌ ಮಾತ್ರ ಹೆಸರು, ಉದ್ದು, ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂಬ ನಿಯಮ ಎಷ್ಟು ಸರಿ ಎಂದು ಪ್ರಶ್ನಿಸಿದ ರೈತರು. ಪ್ರತಿಯೊಬ್ಬ ರೈತರಿಂದ 20 ಕ್ವಿಂಟಲ್‌ ಖರೀದಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next