Advertisement

ಮರಾಠಿಗರಿಗೆ ಸಚಿವ ಸ್ಥಾನ ನೀಡಲು ಮನವಿ

12:07 PM Sep 18, 2018 | Team Udayavani |

ಹುಮನಾಬಾದ: ಮರಾಠಾ ಸಮುದಾಯದ ನಿಯೋಗ ಸೋಮವಾರ ಭಾಲ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿರುವ 6ಜನ ಮರಾಠಾ ಶಾಸಕರಲ್ಲಿ ಒಬ್ಬರಿಗಾದರೂ ಸಚಿವ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿತು.

Advertisement

ಕ್ಷತ್ರೀಯ ಮರಾಠಾ ಸಮಾಜ ರಾಜ್ಯ ಘಟಕದ ಅಧ್ಯಕ್ಷ ಸುರೇಶರಾವ್‌ ಸಾಠೆ ಮತ್ತು ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ನೇತೃತ್ವದ ನಿಯೋಗದ ಮನವಿಗೆ ಸ್ಪಂದಿಸಿದ ಈಶ್ವರ ಖಂಡ್ರೆ ಅವರು, ಮರಾಠಿಗರಿಗೆ ಸಚಿವ ಸ್ಥಾನ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. 

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸುವಂತೆ ಈಶ್ವರ ಖಂಡ್ರೆ ಅವರು ಮರಾಠಾ ಸಮುದಾಯ ಮುಖಂಡರಿಗೆ ಸಲಹೆ ನೀಡಿದರು. ತಾಪಂ ಸದಸ್ಯ ಪರಮೇಶ್ವರ ಕೆ.ಪಾಟೀಲ, ಜ್ಞಾನದೇವ ಭೋಸ್ಲೆ, ಗೋರಖ ಸಗರ್‌, ದಿಗಂಬರರಾವ್‌ ಮಾನಕರೆ, ಬಾಬುರಾವ್‌ ಕಾರಭಾರಿ ಸೇರಿ 25ಕ್ಕೂ ಅಧಿಕ ಜನ ನಿಯೋಗದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next