Advertisement

ಲಸಿಕೆ ಹಾಕಿಸಿಕೊಳ್ಳಲು ಮನವಿ

04:30 PM Apr 16, 2021 | Team Udayavani |

ತುಮಕೂರು: ನಗರವನ್ನು ಕೊರೊನಾ ರೋಗಮುಕ್ತವಾಗಿಸುವ ನಿಟ್ಟಿನಲ್ಲಿ 2-3 ವಾರ್ಡ್‌ಸೇರಿದಂತೆ ಒಂದು ಕಡೆ ಲಸಿಕೆ ಹಾಕುವಕೇಂದ್ರವನ್ನು ತೆರೆಯುತ್ತಿದ್ದು, 45 ವರ್ಷಮೇಲ್ಪಟ್ಟ ಎಲ್ಲರೂ ಅಲ್ಲಿಗೆ ಆಗಮಿಸಿ,ಸ್ವಯಂಪ್ರೇರಿತವಾಗಿ ಲಸಿಕೆಪಡೆದುಕೊಳ್ಳುವಂತೆ ತುಮಕೂರುಮಹಾನಗರ ಪಾಲಿಕೆ ಮೇಯರ್‌ಬಿ.ಜಿ.ಕೃಷ್ಣಪ್ಪ ಮನವಿ ಮಾಡಿದರು.

Advertisement

ನಗರದ ಟೌನ್‌ಹಾಲ್‌ ಸಮೀಪದಲ್ಲಿರುವಟೌನ್‌ಕ್ಲಬ್‌ನಲ್ಲಿ ಆರೋಗ್ಯ ಇಲಾಖೆಸಹಯೋಗದಲ್ಲಿ ಕ್ಲಬ್‌ನ ಸದಸ್ಯರಿಗಾಗಿಏರ್ಪಡಿಸಿದ್ದ ಕೋವಿಡ್‌ ಕಾಯಿಲೆ ವಿರುದ್ಧದಉಚಿತ ಲಸಿಕೆ ಹಾಕುವ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದ ಅವರು,ಕೊರೊನಾ ಎರಡನೇ ಅಲೆಯಿಂದ ಬಹಳಜನರು ಬಹುಬೇಗ ರೋಗಕ್ಕೆ ತುತ್ತಾಗುತ್ತಿದ್ದಾರೆ.ಇದರಿಂದ ಬಚಾವ್‌ ಆಗಲು ಇರುವ ಏಕೈಕಮಾರ್ಗವೆಂದರೆ ವ್ಯಾಕ್ಸಿನೇಷನ್‌ಪಡೆಯುವುದಾಗಿದೆ ಎಂದರು.

ಜಿಲ್ಲಾಡಳಿತದೊಂದಿಗೆ ಸಹಕರಿಸಿ: ಹಾಗಾಗಿನಗರಪಾಲಿಕೆ, ಜಿಲ್ಲಾಡಳಿತ ಮತ್ತು ಆರೋಗ್ಯಇಲಾಖೆಯ ಸಹಯೋಗದಲ್ಲಿ ನಗರದ 2-3ವಾರ್ಡ್‌ಗಳನ್ನು ಒಟ್ಟಿಗೆ ಸೇರಿಸಿ ಒಂದೆಡೆಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗುತ್ತಿದೆ. ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಂಡು, ನಗರವನ್ನುಕೋವಿಡ್‌ ಮುಕ್ತಗೊಳಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.

ಟೌನ್‌ಕ್ಲಬ್‌ ಕಾರ್ಯದರ್ಶಿ ಸುಜ್ಞಾನ್‌ಹಿರೇಮs… ಮಾತನಾಡಿ, ವಾರ್ಡ್‌ನಕಾರ್ಪೋ ರೇಟರ್‌, ನಗರಪಾಲಿಕೆ ಹಾಗೂಆರೋಗ್ಯ ಇಲಾಖೆ ಸಹಕಾರದೊಂದಿಗೆ ಕ್ಲಬ್‌ನ 45 ವರ್ಷ ವಯಸ್ಸು ಮೀರಿದ ಸದಸ್ಯರಿಗೆಲಸಿಕೆ ಹಾಕುವ ಕಾರ್ಯಕ್ಕೆ ಇಂದು ಚಾಲನೆನೀಡಲಾಗಿದೆ. ಸದಸ್ಯರು ಇದರ ಪ್ರಯೋಜನಪಡೆದುಕೊಂಡು ರೋಗಮುಕ್ತರಾಗಬೇಕೆಂದುಹೇಳಿದರು.ಕ್ಲಬ್‌ನ ಉಪಾಧ್ಯಕ್ಷ ಅಮರನಾಥ್‌,ಕಾರ್ಯಕಾರಿ ಮಂಡಳಿ ಸದಸ್ಯ ಟಿ.ಕೆ.ಕುಮಾರ್‌,ಧನಿಯಕುಮಾರ್‌, ಭಾರತೀಶ್‌,ಸುನಿಲ್‌, ಲೋಕೇಶ್‌ ಎಚ್‌.ಆರ್‌, ಪ್ರಭು,ಮಹೇಶ್‌, ಆರೋಗ್ಯ ಇಲಾಖೆಯ ಅಧಿಕಾರಿಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next