Advertisement

ಸಿದ್ದನಗೌಡ ಪಾಟೀಲ ಪ್ರತಿಮೆ ಸ್ಥಾಪನೆಗೆ ಮನವಿ

09:23 PM Jul 09, 2021 | Girisha |

ವಿಜಯಪುರ: ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಸಹಕಾರಿ ಸಚಿವಾಲಯ ಆರಂಭಿಸಿದ್ದು, ದೇಶದ ಸಹಕಾರಿ ವ್ಯವಸ್ಥೆಯ ಬಲವರ್ಧನೆಗೆ, ಕೃಷಿ ಹಾಗೂ ಗ್ರಾಮೀಣ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಆಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವುದಾಗಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ನಿರ್ದೇಶಕ ಸಿದ್ರಾಮಪ್ಪ ಉಪ್ಪಿನ ಸಂತಸ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಎರಡನೇ ಅವಧಿಯಲ್ಲಿನ ಮೊದಲ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೃಷಿ ಕೃತಜ್ಞತೆಯಲ್ಲಿದ್ದ ಸಹಕಾರಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದು ಅಸಾಧ್ಯವಾಗಿತ್ತು.

Advertisement

ಶತಮಾನದ ಇತಿಹಾಸ ಹೊಂದಿÃುವ ಸಹಕಾರಿ ಆರ್ಥಿಕತೆ ಗ್ರಾಮೀಣ ಹಾಗೂ ಕೃಷಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಹಕಾರಿ ವ್ಯವಸ್ಥೆಗೆ ಪ್ರತ್ಯೇಕ ಸಚಿವಾಲಯದ ಆಗತ್ಯವಿತ್ತು. ದೇಶದಲ್ಲಿ ಸಹಕಾರಿ ಸಚಿವಾಲಯದ ಆಗತ್ಯದ ಕುರಿತು ರಾಷ್ಟ್ರೀಯ ಸಹಕಾರ ಭಾರತಿ ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಈ ಬಗ್ಗೆ ಹಲವು ಬಾರಿ ಮಾಡಿಕೊಂಡಿದ್ದ ಮನವಿ ಈಗ ಸಾಕಾರಗೊಂಡಿದೆ ಎಂದರು.

ಇದಲ್ಲದೇ ಸಹಕಾರಿ ನೂತನ ಸಚಿವಾಲಯ ಸ್ಥಾಪನೆ ಜತೆಗೆ ಕೇಂದ್ರದ ಗೃಹ ಸಚಿವ ಅಮಿತ ಶಾ ಅವರಿಗೆ ವಹಿಸಿದ್ದು, ದೇಶದಲ್ಲಿ ನಡೆದಿರುವ ಸಹಕಾರಿ ಅವ್ಯವಹಾರಗಳ ತಾರ್ಕಿಕ ಅಂತ್ಯ ಕಾಣುವಲ್ಲಿ ನೆರವಾಗಲಿದೆ. ಸಮುದಾಯ ಸಹಭಾಗಿತ್ವದ ಆಧಾರಿತ ವ್ಯವಸ್ಥೆಯ ಸಹಕಾರಿ ದೇಶದ ಸಹಕಾರಿ ಆಂದೋಲನ ಬಲಪಡಿಸುವಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಇನ್ನು ಹೆಚ್ಚುಗಾರಿಕೆ ಪಡೆಯಲಿದೆ. ಪ್ರತ್ಯೇಕ ಆಡಳಿತ ಕಾನೂನು, ನೀತಿ, ಚೌಕಟ್ಟುಗಳು ದೇಶದ ಗ್ರಾಮೀಣ, ಕೃಷಿ ಹಾಗೂ ಸಹಕಾರಿ ವ್ಯವಸ್ಥೆ ಬಲವರ್ಧನೆಗೆ ಹೆಚ್ಚಿನ ಬಲ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಹಕಾರ ಭಾರತಿ ರಾಜ್ಯದ ಮಾಜಿ ಅಧ್ಯಕ್ಷ ಎಂ.ಜಿ.ಪಾಟೀಲ ದೇಶದ ಸಹಕಾರಿಗೆ 117 ವರ್ಷಗಳ ಹಿಂದೆ ಕಣಗಿನಹಾಳ ಗ್ರಾಮದ ಸಿದ್ಧನಗೌಡ ಪಾಟೀಲ ಅವರು ಜನ್ಮ ನೀಡಿದ ಕರ್ನಾಟಕ ದೇಶಕ್ಕೆ ಪ್ರತ್ಯೇಕ ಸಹಕಾರಿ ವ್ಯವಸ್ಥೆ ಒಂದೇ ರೀತಿಯಲ್ಲಿ ಇರಲೆಂಬ ಅಶಯ ಹೊಂದಲಾಗಿತ್ತು. ಈ ಕುರಿತು ಹಲವು ಬಾರಿ ಕೇಂದ್ರಕ್ಕೆ ಮಾಡಿಕೊಂಡಿದ್ದ ಮನವಿಗಳು ಕೊನೆಗೂ ಸಹಕಾರಿ ಪ್ರತ್ಯೇಕ ಸಚಿವಾಲಯದ ಅಗತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ಈಗ ಯಶಸ್ವಿಯಾಗಿದೆ ಎಂದರು.

ಸಹಕಾರಿ ಸಚಿವಾಲಯದ ಎದುರು ದೇಶದ ಸಹಕಾರಿ ಜನಕ ಸಿದ್ಧನಗೌಡ ಅವರ ಪ್ರತಿಮೆ ಸ್ಥಾಪಿಸಬೇಕು. ಸಹಕಾರಿ ಸಚಿವಾಲಯದ ಕೇಂದ್ರ ಕಚೇರಿ ಹಾಗೂ ದೇಶದ ಎಲ್ಲ ರಾಜ್ಯಗಳ ಸಹಕಾರಿ ಕಚೇರಿಗಳಲ್ಲಿ ಸಹಕಾರಿ ಜನಕನ ಭಾವಚಿತ್ರ ಹಾಕಿಸುವುದನ್ನು ಕಡ್ಡಾಯಗೊಳಿಸಿ ಸೂಕ್ತ ಗೌರವ ಸಲ್ಲಿಸಬೇಕು. ಈ ಕುರಿತು ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಮನವಿ ಮಾಡುವುದಾಗಿ ಹೇಳಿದರು. ಸಹಕಾರಿ ಭಾರತಿ ರಾಜ್ಯ ಕಾರ್ಯದರ್ಶಿ ಗುರುಶಾಂತ ನಿಡೋಣಿ, ಸಹಕಾರಿ ಭಾರತಿ ಜಿಲ್ಲಾ ಉಪಾಧ್ಯಕ್ಷ ಶ್ರೀಮಂತ ಇಂಡಿ ಇತರರು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next