Advertisement

ವಿಶೇಷ ಪ್ಯಾಕೇಜ್‌ ವ್ಯಾಪ್ತಿಗೆ ಸೇರಿಸಲು ಒತ್ತಾಯಿಸಿ ಮನವಿ

11:05 AM May 09, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೊಂದರೆ ಒಳಗಾದ ಅಸಂಘಟಿತ ಕಾರ್ಮಿಕ ವಲಯಕ್ಕೆ ಸರಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದ್ದು, ಅದರಿಂದ ಹೊರಗುಳಿದ ವಲಯಗಳಿಗೆ ನೆರವು ನೀಡುವಂತೆ ಭಾರತೀಯ ಮೂಲ ನಿವಾಸಿಗಳ ಒಕ್ಕೂಟದಿಂದ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಲಾಕ್‌ಡೌನ್‌ನಿಂದ ಚರ್ಮ ಕುಶಲಕರ್ಮಿಗಳು, ಬೀದಿಬದಿ ವ್ಯಾಪಾರಸ್ಥರನ್ನು ಕಡೆಗಣಿಸಿದ್ದು ಖೇದಕರ ಸಂಗತಿ. ಆದ್ದರಿಂದ ವಿಶೇಷ ಪ್ಯಾಕೇಜ್‌ ಘೋಷಣೆಯಲ್ಲಿ ಇನ್ನುಳಿದ ವಲಯದವರನ್ನು ಸೇರಿಸುವ ಮೂಲಕ ಅವರಿಗೆ ಅನಕೂಲ ಮಾಡಿಕೊಡಬೇಕೆಂದು ಶಂಕರ ಅಜಮನಿ, ಗಂಗಾಧರ ಪೆರೂರು, ನಲ್ಲಪ್ಪ ಪೂಜಾರಿ, ಮಹೇಶ ಭಂಡಾರಿ, ಫಕ್ಕೀರಪ್ಪ ಚಲವಾದಿ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next