ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಏತ ನೀರಾವರಿ ಯೋಜನೆಗಳನ್ನು ಬಜೆಟ್ನಲ್ಲಿ ಮಂಜೂರ ಮಾಡಿ ಅನುದಾನವನ್ನು ಮೀಸಲಿಡಬೇಕೆಂದು ಶಾಸಕ ದುರ್ಯೋಧನ ಐಹೊಳೆ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.
ಬೆಳಗಾವಿಯಲ್ಲಿ ಮುಖ್ಯಮಂತ್ರಿ ಆಗಮಿಸಿದ ಹಿನ್ನಲ್ಲೆಯಲ್ಲಿ ಶಾಸಕ ಐಹೊಳೆ ಅವರು, ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಗ್ರಾಮಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಪ್ರತಿ ವರ್ಷ ಬರಗಾಲ ಚಾಯೆ ಮೂಡುತ್ತಿರುವದರಿಂದ ನೀರಿನ ಸಮಸ್ಯೆ ಉದ್ಭವಿಸುತ್ತಿದ್ದು, ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರ ಜಮೀನುಗಳು ಫಲವತ್ತಾದ ಭೂಮಿಗಳಿದ್ದು ನೀರಾವರಿ ಸೌಲಭ್ಯವಿಲ್ಲದೆ. ರೈತರಿಗೆ ಬೆಳೆಗಳಿಗಳನ್ನು ಬೆಳೆಯಲು ತುಂಬಾ ತೊಂದರೆಯಾಗುತ್ತಿದೆ.
ಹೀಗಾಗಿ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದೇ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದರಿಂದ ಇಲ್ಲಿನ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರ ಫಲವತ್ತಾದ ಭೂಮಿಗಳಿಗೆ ನೀರು ಇಲ್ಲದೇ ತುಂಬಾ ತೊಂದರೆಯಾಗುತ್ತಿದ್ದು, ಆದ್ದರಿಂದ ಈ ಏತ ನೀರಾವರಿ ಯೋಜನೆಗಳನ್ನು ಬಜೆಟ್ನಲ್ಲಿ ಮಂಜೂರ ಮಾಡಿ ಅನುದಾನವನ್ನು ಮೀಸಲಿಡಬೇಕೆಂದು ಮನವಿ ಮಾಡಿದರು.
ಕರಗಾಂವ ಏತ ನೀರಾವರಿ ಯೋಜನೆಯಡಿ ಒಟ್ಟು ೧೪ ಗ್ರಾಮಗಳು ಬರುತ್ತಿದ್ದು, ಅದರ ವಿಸ್ತಿರ್ಣ ಒಟ್ಟು ೮೧೧೯ ಹೆಕ್ಟೇರ್ ಪ್ರದೇಶ ಆಗುತ್ತಿದ್ದು, ಅದರ ಅಂದಾಜು ವೆಚ್ಚ ರೂ.೪೭೧.೦೦ ಕೋಟಿ ಆಗುತ್ತದೆ. ಜೈ ಹನುಮಾನ ಏತ ನೀರಾವರಿ ಯೋಜನೆಯಡಿ ಒಟ್ಟು ೮ ಗ್ರಾಮಗಳು ಬರುತ್ತಿದ್ದು, ಅದರ ವಿಸ್ತಿರ್ಣ ಒಟ್ಟು ೪೦೨೫ ಹೆಕ್ಟೇರ್ ಪ್ರದೇಶ ಆಗುತ್ತಿದ್ದು, ಅದರ ಅಂದಾಜು ವೆಚ್ಚ ರೂ.೪೮೩.೬೬ ಕೋಟಿ ಆಗುತ್ತದೆ.
ಬೆಂಡವಾಡ ಏತ ನೀರಾವರಿ ಯೋಜನೆಯಡಿ ಒಟ್ಟು ೧೬ ಗ್ರಾಮಗಳು ಬರುತ್ತಿದ್ದು, ಅದರ ವಿಸ್ತರ್ಣ ಒಟ್ಟು ೯೬೩೫ ಹೆಕ್ಟೇರ್ ಪ್ರದೇಶ ಆಗುತ್ತಿದ್ದು, ಅದರ ಅಂದಾಜು ವೆಚ್ಚ ರೂ.೭೯೬.೦೦ ಕೋಟಿ ಆಗುತ್ತದೆ. ನಾಗರಮುನ್ನೋಳ್ಳಿ ಏತ ನೀರಾವರಿ ಯೋಜನೆಯು ಅಂರ್ಜಲ ಮಟ್ಟವನ್ನು ಸುಧಾರಿಸಲು ೧೯ ಬ್ಯಾರೇಜುಗಳು/ಚೆಕ್ ಡ್ಯಾಮಗಳನ್ನು ತುಂಬುವ ಪ್ರಸ್ತಾವನೆ ಒಟ್ಟು ೨ ಗ್ರಾಮಗಳು ಅದರ ಅಂದಾಜು ವೆಚ್ಚ ರೂ.೩೫.೨೦ ಕೋಟಿ ಆಗುತ್ತದೆ.
ಈ ಸಂದರ್ಭದಲ್ಲಿ ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ್ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಂತೇಶ ಕವಟಗಿಮಠ, ಮಾಜಿ ಲೋಕಸಭಾ ಸದಸ್ಯರಾದ ಅಮರಸಿಂಹ ಪಾಟೀಲ್, ರಾಯಬಾಗ್ ಮತಕ್ಷೇತ್ರದ ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ಮುಖಂಡರು ಉಪಸ್ಥಿತರಿದ್ದರು.