Advertisement

ನಕಲಿ ಮದ್ಯ ಮಾರಾಟ ಕಡಿವಾಣಕ್ಕೆ ಆಗ್ರಹಿಸಿ ಮನವಿ

06:05 PM May 31, 2022 | Team Udayavani |

ಲಿಂಗಸುಗೂರು: ರಾಜ್ಯದ ತಾಂಡ ಹಾಗೂ ಹಳ್ಳಿಗಳಲ್ಲಿ ನಕಲಿ ಮದ್ಯ ಮಾರಾಟ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಗೋರಸೇನಾ ತಾಲೂಕು ಪದಾಧಿಕಾರಿಗಳು ಸೋಮವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ರಾಜ್ಯದ ತಾಂಡಾಗಳಲ್ಲಿ ಹಾಗೂ ಹಳ್ಳಿಗಳಲ್ಲಿ ನಕಲಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ನಕಲಿ ಮದ್ಯ ಮಾರಾಟದಿಂದ ಬಡಜನರ ಆರೋಗ್ಯ ಹಾಳಾಗುತ್ತಿದೆ. ಇದರ ಜೊತೆಗೆ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.

ಯಾದಗಿರಿ ಜಿಲ್ಲೆಯ ಶಾಹಪುರ ತಾಲೂಕಿನ ನಕಲಿ ಮದ್ಯ ಮಾರಾಟ ದಂಧೆಯ ಪ್ರಮುಖ ಆರೋಪಿ ಹನುಮಂತರಾಯ ಸಾಹುಗೆ ಬಂಧಿಸಲು ಹೋದ ಅಬಕಾರಿ ಅಧಿಕಾರಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ರಾಜ್ಯಾದ್ಯಂತ ನಕಲಿ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಗೋರಸೇನಾ ತಾಲೂಕು ಘಟಕದ ಅಧ್ಯಕ್ಷ ಥಾವರೆಪ್ಪ ಜಾಧವ್‌, ಲಕ್ಷ್ಮಣ ರಾಠೊಡ್‌, ತಿಪ್ಪಣ್ಣ ರಾಠೊಡ್‌, ಮೌನೇಶ ರಾಠೊಡ್‌, ಸಂತೋಷ, ರಾಮಪ್ಪ, ದೇವಪ್ಪ, ರಮೇಶ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next