Advertisement

ಸೌರ ಫ‌ಲಕ ಸರಿಪಡಿಸಿ

01:32 PM Dec 16, 2018 | Team Udayavani |

ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಈಗಾಗಲೇ ಅಳವಡಿಸಿರುವ ಕೆಲವೊಂದು ಮಹತ್ವ ಪೂರ್ಣ ಯೋಜನೆಗಳು ಹಾಳಾಗಿ ಮೂಲೆ ಗುಂಪಾಗುತ್ತಿರುವುದು ದುರಾದೃಷ್ಟಕರ.

Advertisement

ನಿತ್ಯವೂ ಸಾವಿರಾರು ಪ್ರಯಾಣಿಕರು ಸಂಚರಿಸುವ ಪಿ.ವಿ. ಎಸ್‌. ವೃತ್ತದ ಸಮೀಪವಿರುವ ಸಿಗ್ನಲ್‌ ಲೈಟ್‌ ಕಂಬಕ್ಕೆ ಅಳವಡಿಸಿರುವ ಸೌರ ಫ‌ಲಕ, ಸೂಕ್ತ ನಿರ್ವಹಣೆ ಇಲ್ಲದೇ ಅಳವಡಿಸಿದ ಸ್ಥಳದಿಂದ ಕಿತ್ತು ಅರ್ಧದಷ್ಟು ಹೊರ ಬಂದು ನೇತಾಡುತ್ತಿದೆ. ಅಪಾಯಕಾರಿಯಾಗಿರುವ ಈ ಫ‌ಲಕ ಇನ್ನೂ ಯಾರ ಕಣ್ಣಿಗೂ ಕಾಣಿಸದಿರುವುದು ವಿಪರ್ಯಾಸ. ಇದರ ಬಳಿ ಟ್ರಾಫಿಕ್‌ ಪೊಲೀಸರೂ ನಿಂತಿರುತ್ತಾರೆ. ನಿತ್ಯವೂ ಸಾಕಷ್ಟ ಪಾದಚಾರಿಗಳೂ ಸಂಚರಿಸುತ್ತಿರುತ್ತಾರೆ. ಹೀಗಾಗಿ ಅಪಾಯಕಾರಿಯಾಗಿರುವ ಇದನ್ನು ಕೂಡಲೇ ದುರಸ್ತಿಗೊಳಿಸುವತ್ತ ಸಂಬಂಧಪಟ್ಟವರು ಗಮಹರಿಸಬೇಕಿದೆ.

ಪ್ರಶಾಂತ್‌ ನಾಯಕ್‌,
ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next