Advertisement

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

01:53 AM Jul 06, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಸಂಬಂಧ ಶವ ವಿಲೇವಾರಿಗೆ ಬಳಸಿದ ಮಾರ್ಗ, ಸುಮನಹಳ್ಳಿ ಮೋರಿಯಲ್ಲಿ ಶವ ಎಸೆದ ಜಾಗ ಸೇರಿದಂತೆ ಆರೋಪಿಗಳ ಕೆಲ ಚಟು ವಟಿಕೆಗಳ ಕುರಿತು ಸಮಗ್ರ ಬ್ಲೂ ಪ್ರಿಂಟ್‌ ರಚಿಸಿ ಕೊಡುವಂತೆ ಲೋಕೋಪಯೋಗಿ ಇಲಾಖೆಗೆ ಪೊಲೀಸರು ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ಆರೋಪಿಗಳು ಕೊಲೆ ಕೃತ್ಯವೆಸಗಿದ ಸ್ಥಳ, ಶವ ವಿಲೇವಾರಿಗೆ ಓಡಾಡಿದ ಸ್ಥಳಗಳು, ಮೃತನ ಶವ ಎಸೆದ ಸ್ಥಳದ ನಕ್ಷೆಯನ್ನು ತಯಾರು ಮಾಡಿಕೊಡುವಂತೆ ಕಟ್ಟಡಗಳ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳು ಬಳಸುತ್ತಿದ್ದ ಸಿಮ್ ಗಳು ಬೇರೆಯವರ ಹೆಸರಿನಲ್ಲಿವೆ. ಇದೀಗ ಸಿಮ್‌ ಕಾರ್ಡ್‌ನ ಮಾಲಕರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಸ್ಥಳದಲ್ಲಿ ಸಿಕ್ಕಿರುವ ಬೆರಳಮುದ್ರೆಗಳಿಗೂ ಆರೋಪಿಗಳಿಂದ ಸಂಗ್ರಹಿಸಲಾಗಿರುವ ಫಿಂಗರ್‌ ಪ್ರಿಂಟ್‌ಗಳು ತಾಳೆಯಾಗುತ್ತವೆಯೇ ಎಂಬುದನ್ನು ಅರಿಯಲು ನಗರ ಫಿಂಗರ್‌ ಪ್ರಿಂಟ್‌ ವಿಭಾಗಕ್ಕೆ ಪೊಲೀಸರು ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next