Advertisement

Renukaswamy Case: ಜೈಲಿನಲ್ಲಿರುವ ದರ್ಶನ್‌ಗೆ ಜ್ವರ

06:35 PM Jul 23, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಬಂಧನವಾಗಿರುವ ನಟ ದರ್ಶನ್‌ (Darshan) ಪರಪ್ಪನ ಅಗ್ರಹಾರದಲ್ಲಿದ್ದು ಒಂದು ತಿಂಗಳೇ ಕಳೆದಿದೆ.

Advertisement

ಜೈಲಿನಲ್ಲಿರುವ ದರ್ಶನ್‌ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಅವರನ್ನು ಜೈಲಿನ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.

ಈ ಹಿಂದೆ ದರ್ಶನ್‌ ಅವರಿಜೆ ಜೈಲಿನಲ್ಲಿ ನೀಡುತ್ತಿದ್ದ ಆಹಾರದಿಂದ ಫುಡ್‌ ಪಾಯ್ಸನ್‌ ಆಗಿತ್ತು ಎನ್ನಲಾಗಿತ್ತು. ಈ ಕಾರಣದಿಂದ ಅವರು ಮನೆಯ ಆಹಾರ ಹಾಗೂ ಬೆಡ್‌ ಸೀಟ್‌ ಗಳನ್ನು ನೀಡಬೇಕೆಂದು ಕೋರ್ಟಿಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಯುತ್ತಿದೆ.

ಇದೀಗ ಕಳೆದ ಮೂರು ದಿನಗಳಿಂದ ದರ್ಶನ್‌ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಅವರು ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿಗಾವಹಿಸಿರುವ ವೈದ್ಯರು ಅವರಿಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗಿದೆ. ಈಗ ಅವರು ಕೊಂಚ ಸುಧಾರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ದರ್ಶನ್‌ ಸೇರಿ ಈ ಪ್ರಕರಣದಲ್ಲಿ 17 ಮಂದಿಯ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್‌ 1ರವರೆಗೆ ವಿಸ್ತರಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next