Advertisement

ಅರುಣ್ ಸಿಂಗ್ ಭೇಟಿಯಾದ ರೇಣುಕಾಚಾರ್ಯ: ಯೋಗೇಶ್ವರ್ ವಿರುದ್ಧ ದೂರು

12:32 PM Jan 15, 2021 | Team Udayavani |

ಬೆಂಗಳೂರು: ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಮುನಿಸಿಕೊಂಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದು ದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಕ್ಷೇತ್ರದ ವಿಚಾರಕ್ಕಾಗಿ ದೆಹಲಿಗೆ ಬಂದಿದ್ದೆ. ನಂತರ ಅರುಣ್ ಸಿಂಗ್ ಅವರಿಗೆ ಕರೆ ಮಾಡಿ ಸಮಯ ಕೇಳಿದ್ದೆ. ಹೀಗಾಗಿ ಇಂದು ಬೆಳಗ್ಗೆ 10 ಗಂಟೆಗೆ ಭೇಟಿಯಾಗಿದ್ದೆ ಎಂದರು.

ಯೋಗೇಶ್ವರ್ ರಿಂದ ರಾಜ್ಯ ಬಿಜೆಪಿ ಬೆಳೆದಿಲ್ಲ. ಚುನಾವಣೆಯಲ್ಲಿ ಅವರೇ ತಿರಸ್ಕಾರವಾದರು. ಅಂಥವರು ಬಿಜೆಪಿಯನ್ನು ಏನು ಬೆಳಿಸುತ್ತಾರೆ. ಅವರು ಎಷ್ಟು ಐಷಾರಾಮಿ ಕಾರು, ಬಂಗಲೆ ಖರೀದಿ ಮಾಡಿದ್ದಾರೆ ಎನ್ನವುದರ ಲೆಕ್ಕ ನನ್ನ ಬಳಿಯಿದೆ. ಅದನ್ನು ನಾಯಕರಿಗೆ ನೀಡುತ್ತೇನೆ ಎಂದರು.

ಇದನ್ನೂ ಓದಿ:ಯಡಿಯೂರಪ್ಪ ಈಗ ದಾರಿ ತಪ್ಪಿದ ಮಗ, ಅವರ ಜೀವ ವಿಜಯೇಂದ್ರನ ಕೈಯಲ್ಲಿದೆ: ವಿಶ್ವನಾಥ್

ರಮೇಶ್ ಜಾರಕಿಹೊಳಿಗೆ ಯೋಗೇಶ್ವರ್ ಮೇಲೆ ಪ್ರೀತಿಯಿದ್ದರೆ ಮಾತನಾಡಲಿ. ಅದು ಬಿಟ್ಟು ಸಚಿವ ಸ್ಥಾನ ನೀಡಲು ಅವರು ಮುಖ್ಯಮಂತ್ರಿಯಾ, ವಕ್ತಾರ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

ಹಲವು ಶಾಸಕರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಮುಂದಿನ ವಾರ ನಾವೆಲ್ಲಾ ಸಭೆ ಸೇರಿ ಚರ್ಚೆ ನಡೆಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next