Advertisement

ನವೋದಯ ಕನ್ನಡ ಸೇವಾ ಸಂಘ ಥಾಣೆ: 49ನೇ ವಾರ್ಷಿಕ ಮಹಾಸಭೆ

05:04 PM Jul 15, 2018 | Team Udayavani |

ಥಾಣೆ: ತುಳು-ಕನ್ನಡಿಗರ ಪ್ರತಿಷ್ಠಿತ ನವೋದಯ ಕನ್ನಡ ಸೇವಾ ಸಂಘದ 49 ನೇ ವಾರ್ಷಿಕ ಮಹಾಸಭೆಯು ಜೂ. 24 ರಂದು ನವೋದಯ ಜ್ಯೂನಿಯರ್‌ ಕಾಲೇಜಿನ ಸಭಾಗೃಹದಲ್ಲಿ ನಡೆಯಿತು.

Advertisement

ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್‌. ಶೆಟ್ಟಿ ಇವರು 48 ನೇ ವಾರ್ಷಿಕ ವರದಿ ಮಂಡಿಸಿ, ಕಳೆದ ಒಂದು ವರ್ಷದಲ್ಲಿ ಸರ್ವರ ಸಹಕಾರದಿಂದ ನಡೆದ ವಿವಿಧ ಕಾರ್ಯಗಳ ವಿವರ ನೀಡಿದರು. ಅಲ್ಲದೆ ಭವಿಷ್ಯದಲ್ಲಿ ನಡೆಯಬೇಕಾದ ಕೆಲಸಗಳ ಬಗ್ಗೆಯೂ ಸಭಿಕರಿಗೆ ಮನವರಿಕೆ ಮಾಡಿದರು.

ಗೌರವ ಪ್ರಧಾನ ಕೋಶಾಧಿಕಾರಿ   ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ  2018-2019 ನೇ ಸಾಲಿಗೆ ಮೆಸರ್ಸ್‌ ಸದಾಶಿವ ಮತ್ತು ಕಂಪೆನಿಯವರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ. ಎಸ್‌. ಬಂಗೇರ, ಕೆ. ಎಸ್‌. ರಾವ್‌, ಆರ್‌. ಎಚ್‌. ಬೈಕಂಪಾಡಿ ಹಾಗೂ ಹಿರಿಯ ಸದಸ್ಯರುಗಳಾದ ಎಸ್‌. ಎಂ. ಬಿರಾದಾರ್‌ ಅವರು ಸಂಘ ನಡೆದು ಬಂದ ದಾರಿಯ ಬಗ್ಗೆ ಹಾಗೂ ಮುಂದೆ ಯಾವ ರೀತಿಯಲ್ಲಿ ಕಾರ್ಯಕಾರಿ ಸಮಿತಿಯು ಸಂಘ ಹಾಗೂ ಶೈಕ್ಷಣಿಕ ಸಂಸ್ಥೆಯ ಏಳ್ಗೆಗಾಗಿ ದುಡಿಯಬೇಕು ಎಂಬುವುದರ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಜಗದೀಶ್‌ ಬಿ. ಶೆಟ್ಟಿ ಹಾಗೂ ರವಿ ಎಸ್‌. ಹೆಗ್ಡೆ ಅವರು ಕಾರ್ಯಕಾರಿ ಸಮಿತಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡು, ನವೋದಯ ಕನ್ನಡ ಸೇವಾ ಸಂಘವು ಇನ್ನಿತರ ಸಂಘ-ಸಂಸ್ಥೆಗಳಿಂದ ವಿಭಿನ್ನವಾಗಿದ್ದು, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವುದೇ ಹೆಮ್ಮೆಯ ವಿಷಯವಾಗಿದೆ ಎಂದರು. ಪ್ರೇಮನಾಥ ಕುಕ್ಯಾನ್‌ ಮತ್ತು ಯಶವಂತ ಜಿ. ಕರ್ಕೇರ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಂಘ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರಗತಿಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಚುನಾವಣಾಧಿಕಾರಿಗಳಾದ ಎಸ್‌. ಎಂ. ಬಿರಾದಾರ್‌ ಮತ್ತು ಸಿ. ಎ. ಪೂಜಾರಿ ಅವರು ನೂತನವಾಗಿ ಚುನಾಯಿತಗೊಂಡ ಕಾರ್ಯಕಾರಿ ಸಮಿತಿಯನ್ನು ಅಭಿನಂದಿಸಿ, ಇಂತಹ ಶಿಸ್ತುಬದ್ಧವಾದ ಕಾರ್ಯಕಾರಿ ಸಮಿತಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಈ ಸಂಸ್ಥೆಯು ಭವಿಷ್ಯದಲ್ಲೂ ಹೆಚ್ಚಿನ ಪ್ರಗತಿಯನ್ನು ಕಾಣುವಂತಾಗಲಿ. ನಮಗೂ ಅಳಿಲ ಸೇವೆ ಮಾಡಲು ಅವಕಾಶ ಸಿಗುವಂತಾಗಲಿ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಜಯ ಕೆ. ಶೆಟ್ಟಿ ಇವರು ಮಾತನಾಡಿ, ವಿದ್ಯಾವಂತ ಯುವಕರ ಸೇರ್ಪಡೆಯೊಂದಿಗೆ ಅನುಭವಿ ಹರಿಯರು ಜೊತೆಗೂಡಿ ಕಾರ್ಯಕಾರಿ ಸಮಿತಿಯ ಹಳೆ ಬೇರಿನೊಂದಿಗೆ ಹೊಸ ಚಿಗುರು ಸೇರಿದಂತಾಗಿದೆ. ಸಂಸ್ಥೆಯ ಬೆಳವಣಿಗೆ ತೀವ್ರಗತಿಯಲ್ಲಿ ಸಾಗುವಂತಾಗಲಿ. ಇಂದು ಮಹಿಳಾ ಸದಸ್ಯೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿಯಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಎಲ್ಲಾ ಕಾರ್ಯಕಲಾಪಗಳಿಗೂ ಇದೇ ರೀತಿಯ ಸಹಕಾರ ಪ್ರೋತ್ಸಾಹವನ್ನು ಎಲ್ಲರು ನೀಡಬೇಕು. ಸಂಸ್ಥೆಯು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಈ ವರ್ಷದಲ್ಲಿ ಎಲ್ಲಾ ಕಾರ್ಯಯೋಜನೆಗಳಿಗೆ ಎಲ್ಲರು ಒಮ್ಮತ, ಒಗ್ಗಟ್ಟಿನಿಂದ ಶ್ರಮಿಸಬೇಕು. ಸುವರ್ಣ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿ ಸೋಣ. ಸಂಘದ ಚರಿತ್ರೆಯಲ್ಲಿ ಇದನ್ನು ಅವಿಸ್ಮರಣೀಯ ಗೊಳಿಸಬೇಕು ಎಂದು ಸಂಘದ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ, ಸದಸ್ಯ ಬಾಂಧವರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ನಾವೆಲ್ಲರೂ ಒಂದೇ. ನಮ್ಮೆಲ್ಲರ ಉದ್ದೇಶ ಈ ಸಂಸ್ಥೆಯ ಬೆಳವಣಿಗೆ ಎಂಬ ಭಾವನೆಯಿಂದ ಸಹಕರಿಸಬೇಕು. ನೂತನ ಕಾರ್ಯಕಾರಿ ಸಮಿತಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಸಂಘ ಹಾಗೂ ಶೈಕ್ಷಣಿಕ ಸಂಸ್ಥೆಗಳ ಕೀರ್ತಿಯನ್ನು ಮತ್ತಷ್ಟು ಏರಿಸುವಲ್ಲಿ ನಾವೆಲ್ಲರು ಕಾರ್ಯಪ್ರವೃತ್ತರಾಗೋಣ ಎಂದು ನುಡಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2018-2021 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next