Advertisement

ಇನ್ನು ಮುಂದೆ ಅಮೃತಸರದ ಸ್ವರ್ಣಮಂದಿರದಲ್ಲಿ ಹಾರ್ಮೋನಿಯಂ ಬ್ಯಾನ್‌

09:50 PM May 23, 2022 | Team Udayavani |

ನವದೆಹಲಿ: ಇನ್ನು ಮುಂದೆ ಅಮೃತಸರದ ಸ್ವರ್ಣಮಂದಿರದಲ್ಲಿ ಹಾರ್ಮೋನಿಯಂ ವಾದ್ಯ ಕೇಳಿಸುವುದಿಲ್ಲವೇ? ಹಾರ್ಮೋನಿಯಂ ನುಡಿಸುವುದನ್ನು ಬ್ರಿಟಿಷರು ಪರಿಚಯಿಸಿದ್ದೇ ಹೊರತು ಅದು ನೈಜ ಸಿಖ್‌ ಸಂಪ್ರದಾಯದಲ್ಲಿ ಬರುವುದಿಲ್ಲ ಎಂದು ಹೇಳಿರುವ ಅಕಾಲ್‌ ತಖ್ತ್ ನ ಗಿಯಾನಿ ಹರ್‌ಪ್ರೀತ್‌ ಸಿಂಗ್‌, 3 ವರ್ಷದೊಳಗಾಗಿ ಸ್ವರ್ಣಮಂದಿರದಿಂದ ಹಾರ್ಮೋನಿಯಂ ತೆರವುಗೊಳಿಸುವಂತೆ ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಕಮಿಟಿ(ಎಸ್‌ಜಿಪಿಸಿ)ಗೆ ಸೂಚಿಸಿದೆ.

Advertisement

ಕೀರ್ತನ ಕಮಿಟಿಯು ಇನ್ನು ಹಾರ್ಮೋನಿಯಂ ನುಡಿಸುವ ಬದಲಿಗೆ ಕೀರ್ತನೆ ಮತ್ತು ಗುರ್ಬಾನೀಸ್‌ ಪಠಣದ ವೇಳೆ ಸಾಂಪ್ರದಾಯಿಕ ತಂತಿಯ ಉಪಕರಣ ಬಳಸುವಂತೆ ಆದೇಶಿಸಿದೆ.

ಇದನ್ನೂ ಓದಿ:ಕೇದಾರ ಯಾತ್ರೆ ಸ್ಥಗಿತ; ಉತ್ತರಾಖಂಡದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

ಇದಕ್ಕೆ ಸಿಖ್‌ ಸಮುದಾಯದಿಂದ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗತೊಡಗಿವೆ.

Advertisement

Udayavani is now on Telegram. Click here to join our channel and stay updated with the latest news.

Next