Advertisement

Telangana: ವಿಮೋಚನ ದಿನಾಚರಣೆಗೆ ಕೆಲವು ರಾಜಕೀಯ ಪಕ್ಷಗಳ ಹಿಂದೇಟು: ಅಮಿತ್‌ ಶಾ

11:34 PM Sep 17, 2023 | Team Udayavani |

ಹೈದರಾಬಾದ್‌: ತೆಲಂಗಾಣ ರಾಜ್ಯ ಸ್ಥಾಪನೆಯಾದ ನಂತರವೂ ಕೂಡ ರಾಜಕೀಯ ಪಕ್ಷಗಳು ಮತ ಬ್ಯಾಂಕ್‌ ರಾಜಕೀಯಕ್ಕಾಗಿ “ಹೈದರಾಬಾದ್‌ ವಿಮೋಚನಾ ದಿನ’ ಆಚರಿಸಲು ಹಿಂಜರಿಯುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೂರಿದರು.

Advertisement

“ಹೈದರಾಬಾದ್‌ ವಿಮೋಚನಾ ದಿನ’ ಅಂಗವಾಗಿ ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಹಾಗೂ ಗೌರವ ವಂದನೆ ಸ್ವೀಕರಿಸಿದ ನಂತರ ಅವರು ಮಾತನಾಡಿದರು.

ಇಂದಿನ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳು ಸೇರಿದ್ದ ಅಂದಿನ ಹೈದರಾಬಾದ್‌ ರಾಜ್ಯದಲ್ಲಿ ನಿಜಾಮರ ಶಸ್ತ್ರಸಜ್ಜಿತ ಬೆಂಬಲಿಗರಾದ ರಜಾಕರು ನಡೆಸಿದ್ದ ದೌರ್ಜನ್ಯಗಳನ್ನು ಇದೇ ವೇಳೆ ಅಮಿತ್‌ ಶಾ ನೆನಪಿಸಿದರು.

ಅಭಿವೃದ್ಧಿಗೆ ತೆಲಂಗಾಣ ಮಾದರಿ: ಸಿಎಂ ಕೆಸಿಆರ್‌
ಹೈದರಾಬಾದ್‌ ರಾಜ್ಯವು ಭಾರತದ ಒಕ್ಕೂಟಕ್ಕೆ ಸೇರ್ಪಡೆ ಯಾದ ದಿನವನ್ನು ಆಡಳಿತಾರೂಢ ಭಾರತ್‌ ರಾಷ್ಟ್ರ ಸಮಿತಿ ಸರಕಾರವು “ರಾಷ್ಟ್ರೀಯ ಸಮಗ್ರತೆ ದಿನ’ ಎಂದು ಆಚರಿಸಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ರಾಷ್ಟ್ರ ಧ್ವಜಾ ರೋಹಣ ನೆರವೇರಿಸಿದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಮಾತನಾಡಿ, ತೆಲಂ ಗಾಣವು ಅಭಿವೃದ್ಧಿಯಲ್ಲಿ ದೇಶಕ್ಕೇ ಮಾದರಿ ಯಾಗಿದೆ. ನಮ್ಮ ಸರಕಾರದ ಯೋಜನೆಯ ಲಾಭ ಪಡೆಯದ ಒಂದೇ ಒಂದು ಕುಟುಂಬವೂ ರಾಜ್ಯದಲ್ಲಿಲ್ಲ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next