Advertisement
ಡಿ. 27ರಂದು ಬೊಯಿಸರ್ ಸ್ವಾಮಿ ಶ್ರೀ ನಿತ್ಯಾನಂದ ಮಂದಿರದಲ್ಲಿ ನಡೆದ ಮಂದಿರದ ದಶವಾರ್ಷಿಕ ಪ್ರತಿಷ್ಠಾಪನ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಬೊಯಿಸರ್ ನಿತ್ಯಾನಂದ ಮಂದಿರ ದಲ್ಲಿ ವರ್ಷಪೂರ್ತಿ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ತುಳು, ಕನ್ನಡಿ ಗರು, ಭಕ್ತರು ಮಂದಿರದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.
Related Articles
Advertisement
ಈ ಸಂದರ್ಭದಲ್ಲಿ ಬೊಯಿಸರ್ ಶ್ರೀ ನಿತ್ಯಾನಂದ ಮಂದಿರದ ವಿಶ್ವಸ್ಥ ಮಂಡಳಿಯ ಸುಹಾಸಿನಿ ಡಿ. ನಾಯ್ಕ…, ಸತ್ಯಾ ಎಸ್. ಕೋಟ್ಯಾನ್, ಶ್ರೀನಿವಾಸ್ ಕೋಟ್ಯಾನ್, ಪಾಲ^ರ್ ತಾಲೂಕು ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ರೈ, ಗೌರವಾಧ್ಯಕ್ಷ ಕೆ. ಭುಜಂಗ ಶೆಟ್ಟಿ, ಉದ್ಯಮಿಗಳಾದ ತಾರಾನಾಥ್ ಅಡಪ, ರವೀಂದ್ರ ಶೆಟ್ಟಿ, ಭಾಸ್ಕರ್
ಶೆಟ್ಟಿ, ದಹಿಸರ್ ದಿನೇಶ್ ಅಮೀನ್, ಡಹಾಣು ಸಂತೋಷ್ ಶೆಟ್ಟಿ, ಬಿಕ್ರಿಗುತ್ತು ಜಗದೀಶ್ ಶೆಟ್ಟಿ, ಹೇಮಚಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.
ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಭಕ್ತ ಮಂಡಳಿ ಹಾಗೂ ಭಜನ ಮಂಡಳಿಯ ಸದಸ್ಯರು, ಪಾಲ್ಘರ್ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಪ್ರಸಾದ ಸ್ವೀಕರಿಸಿದರು. ಸಂಜೆ 6ರಿಂದ ಮಂದಿರದ ಪರಿಸರದಿಂದ ಸಮೀಪದ ಶ್ರೀ ದತ್ತಗುರು ಮಂದಿರದ ವರೆಗೆ ನಿತ್ಯಾನಂದ ಬಾಬಾ ಅವರ ಪಲ್ಲಕ್ಕಿ ಮೆರವಣಿಗೆಯು ಜರಗಿತು. ಪೂಜೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳನ್ನು ಪುರೋಹಿತ ಹರೀಶ್ ಶಾಂತಿ ಮತ್ತು ರಾಜೇಶ್ ಶಾಂತಿ ನೆರವೇರಿಸಿದರು.
ರಾತ್ರಿ 8ರಿಂದ ಮಹಾ ಮಂಗಳಾರತಿ ಯೊಂದಿಗೆ ಮಂದಿರದ ಹತ್ತನೇ ಪ್ರತಿಷ್ಠಾ ಮಹೋತ್ಸವವು ಸಂಪನ್ನಗೊಂಡಿತು. ರಮಾ ನಂದ ಪೂಜಾರಿ, ಅಣ್ಣು ದೇವಾಡಿಗ, ಸುರೇಶ್ ದೇವಾಡಿಗ, ದಿವಾಕರ್ ಅಡಪ, ಜಯಾ ಸಾಲ್ಯಾನ್ ಮೊದಲಾದವರು ಧಾರ್ಮಿಕ ಉತ್ಸವದ ಯಶಸ್ಸಿಗೆ ಸಹಕರಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 6ಕ್ಕೆ ಗಣಪತಿಹೋಮ, 7ರಿಂದ 8.30ರ ವರೆಗೆ ಪಂಚಾಮೃತ ಕಳಶಾಭಿಷೇಕ ಮತ್ತು ಆರತಿ ಜರಗಿತು. ಭಕ್ತರು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ನಿತ್ಯಾನಂದ ಸ್ವಾಮಿ ಅವರ ಅನುಗ್ರಹಕ್ಕೆ ಪಾತ್ರರಾದರು.