Advertisement

ಮಾನನಷ್ಟ ಮೊಕದ್ದಮೆ ಹಿಂಪಡೆದ ರಿಲಯನ್ಸ್‌!

01:29 AM May 22, 2019 | Team Udayavani |

ಅಹ್ಮದಾಬಾದ್‌: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ನಾಯಕರ ಮೇಲೆ ಹಾಗೂ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮೇಲೆ ತಾನು ಹೂಡಿದ್ದ 5,000 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಗಳನ್ನು ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ ಸಂಸ್ಥೆ ಹಿಂದಕ್ಕೆ ಪಡೆದಿದೆ.

Advertisement

ವಿವಾದಾತ್ಮಕ ವಾದ ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಲೇಖನವೊಂದನ್ನು ಪ್ರಕಟಿಸಿದ್ದಕ್ಕಾಗಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮೇಲೆ ಹಾಗೂ ತಮ್ಮ ವಿರುದ್ಧ ಹೇಳಿಕೆಗಳನ್ನು ನೀಡಿದ್ದ ಕಾರಣಕ್ಕಾಗಿ ಕಾಂಗ್ರೆಸ್‌ ನಾಯಕರ ಮೇಲೆ ಅಹ್ಮದಾಬಾದ್‌ನ ನ್ಯಾಯಾಲಯವೊಂದರಲ್ಲಿ ಕಾಂಗ್ರೆಸ್‌ ನಾಯಕರಾದ ಸುನಿಲ್‌ ಜಾಖಡ್‌, ರಣದೀಪ್‌ ಸಿಂಗ್‌ ಸುಜೇìವಾಲ, ಊಮನ್‌ ಚಾಂಡಿ, ಅಶೋಕ್‌ ಚವಾಣ್‌, ಅಭಿಷೇಕ್‌ ಮನು ಸಿಂ Ì, ಸಂಜಯ್‌ ನಿರುಪಮ್‌ ಹಾಗೂ ಶಕ್ತಿಸಿನ್ಹ ಗೋಹಿಲ್‌, ನ್ಯಾಷನಲ್‌ ಹೆರಾಲ್ಡ್‌ ಸಂಪಾದಕ ಜಾಫ‌ರ್‌ ಅಘಾ ಹಾಗೂ ಲೇಖಕ ವಿಶ್ವದೀಪಕ್‌ ಹಾಗೂ ಇತರ ಪತ್ರಕರ್ತರು ಹಾಗೂ ಕೆಲವು ಸುದ್ದಿ ಸಂಸ್ಥೆಗಳ ವಿರುದ್ಧವೂ ಈ ಪ್ರಕರಣ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next