Advertisement

30ರೊಳಗೆ ಕಿಸಾನ್‌ ಸಮ್ಮಾನ್‌ಗೆ ನೋಂದಣಿ ಮಾಡಿಸಿ

10:31 AM Jun 24, 2019 | Suhan S |

ಕೊಪ್ಪಳ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಎಲ್ಲ ಅರ್ಹ ಪ್ರತಿಯೊಬ್ಬ ರೈತರೂ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕೆಂದು ಅಳವಂಡಿ ರೈತ ಸಂರ್ಪಕ ಕೇಂದ್ರದ ಕೃಷಿ ಅಧಿಕಾರಿ ಯೋಗೇಶ ಕಾಟ್ರಳ್ಳಿ ಹೇಳಿದರು.

Advertisement

ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ರೈತರಿಗೆ ಪ್ರಧಾನಮಂತ್ರಿ ಕಿಸಾನ್‌ ಸನ್ಮಾನ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಎಲ್ಲಾ ರೈತರು ಅರ್ಹರು. ಈ ಅರ್ಜಿ ಫಾರಂ ಜೊತೆಗೆ ಆಧಾರ್‌ ಕಾರ್ಡ್‌, ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್‌ ಖಾತೆ ಪ್ರತಿಗಳನ್ನು ಸಲ್ಲಿಸಬೇಕೆಂದರು.

ಈ ವೇಳೆ ಗ್ರಾಪಂ ಪಿಡಿಒ ಬಸವರಾಜ ತವದಿ ಮಾತನಾಡಿ, ರೈತರು ರೈತ ಸಂಪರ್ಕ ಕೆಂದ್ರ, ಗ್ರಾಮ ಪಂಚಾಯತ್‌ ಅಥವಾ ಕಾಮನ್‌ ಸರ್ವಿಸ್‌ ಸೆಂಟರ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮೂರು ಕಂತಿನ ಮೂಲಕ ರೈತರಿಗೆ ಆರು ಸಾವಿರ ರೂಪಾಯಿ ಸರಕಾರದಿಂದ ದೊರೆಯಲಿದೆ ಎಂದರು.

ಗ್ರಾಮ ಪಂಚಾಯತ್‌ ಸದಸ್ಯರು, ಗ್ರಾಮ ಪಂಚಾಯತ್‌ ಸಿಬ್ಬಂದಿ, ಅಂದಪ್ಪ ವಾಲಿಕಾರ ಏಳುಕೊಟೇಶ ಕೊಮಲಾಪೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next