Advertisement

ಕೆಂಪುಕೋಟೆಯ ರಕ್ಷಣಾ ಕಂಟೇನರ್‌ಗಳ ಮೇಲೆ ಮೂಡಿತು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಕಲೆ

08:01 PM Aug 15, 2021 | Team Udayavani |

ನವದೆಹಲಿ : ಕೆಂಪುಕೋಟೆಯ ಮುಖ್ಯ ದ್ವಾರದ ಎದುರು ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಲಾಗಿದ್ದ ಕಂಟೇನರ್‌ ಗಳ ಮೇಲೂ ಚಿತ್ರ ಕಲಾವಿದರು ತಮ್ಮ ಕೈಚಳಕ ತೋರಿಸಿದ್ದರು.

Advertisement

ಮಹಾತ್ಮಾ ಗಾಂಧಿ, ಸರ್ದಾರ್‌ ವಲ್ಲಭಾಯಿ ಪಟೇಲ್‌, ನೇತಾಜಿ ಸುಭಾಷ್‌ ಚಂದ್ರ ಬೋಸ್‌, ಝಾನ್ಸಿ ರಾಣಿ ಲಕ್ಷ್ಮಿಭಾಯಿಯಂತಹ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಕಲೆಯನ್ನು ಕಂಟೇನರ್‌ ಗಳ ಮೇಲೆ ಮಾಡಲಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರರ ಜತೆ ಭಾರತದಲ್ಲಿ ಕಂಡ ಅಭಿವೃದ್ಧಿಗಳು, ತಾಂತ್ರಿಕ ಬೆಳವಣಿಗೆಗಳ ಕುರಿತಾಗಿಯೂ ಚಿತ್ರಕಲೆ ಮಾಡಲಾಗಿತ್ತು.

ಈ ವರ್ಷ ಜನವರಿ 26ರ ಗಣರಾಜ್ಯೋತ್ಸವದಂದು ಕೆಂಪು ಕೋಟೆಗೆ ಹೋರಾಟ ನಿರತ ರೈತರು ದಾಳಿ ನಡೆಸಿ, ಸ್ಥಳೀಯ ಧ್ವಜವನ್ನು ಹಾರಿಸಿದ್ದರ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಕ್ಕೆ ಕೆಂಪು ಕೋಟೆಯಲ್ಲಿ ಹೆಚ್ಚಿನ ಭದ್ರತೆ ಅಳವಡಿಸಲಾಗಿತ್ತು.

ಇದನ್ನೂ ಓದಿ :ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಜಮ್ಮು ಕಣಿವೆ ನಾಡಿನಲ್ಲಿ ಬಾನೆತ್ತರಕ್ಕೆ ಹಾರಿದ ತಿರಂಗಾ

Advertisement
Advertisement

Udayavani is now on Telegram. Click here to join our channel and stay updated with the latest news.

Next