Advertisement

ಬೀದಿಗೆ ಬಂದ ರೆಡ್‌ಕ್ರಾಸ್‌ ಒಳ ಜಗಳ

11:37 AM May 09, 2020 | mahesh |

ಚಿಕ್ಕಬಳ್ಳಾಪುರ: ಸಂಕಷ್ಟದಲ್ಲಿ ಮನುಷ್ಯನ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ ಯಾವುದಾದರೂ ಇದ್ದರೆ ಅದು ರಕ್ತ ದಾನದ ಮೂಲಕ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ.
ಜಿಲ್ಲೆಯಲ್ಲಿ ಒಂದು ಕಾಲಕ್ಕೆ ರೆಡ್‌ಕ್ರಾಸ್‌ ಸಂಸ್ಥೆಗೆ ತನ್ನದೇ ಆದ ಗೌರವ, ಘನತೆ ಇತ್ತು. ರಕ್ತ ಸಂಗ್ರಹದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿತ್ತು. ಆದರೆ ಇತ್ತೀಚಿಗೆ ಪ್ರತಿಷ್ಠಿತ ರೆಡ್‌ಕ್ರಾಸ್‌ ಸಂಸ್ಥೆ
ಬೇರೆ ಬೇರೆ ಕಾರಣಗಳಿಗೆ ಅನಾಥವಾಗುತ್ತಿದೆಯೇ ಎಂಬ ಅನುಮಾನ ಜಿಲ್ಲೆಯ ಜನರನ್ನು ಕಾಡುತ್ತಿದೆ.

Advertisement

ರೆಡ್‌ಕ್ರಾಸ್‌ ಸಂಸ್ಥೆಯ ಪದಾಧಿಕಾರಿಗಳ ನಡುವಿನ ಒಳ ಜಗಳ ಬೀದಿಗೆ ಬಂದಿದ್ದು, ಹಲವು ವರ್ಷಗಳಿಂದ ಕಾರ್ಯ ದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಡ್ಲಘಟ್ಟದ ಗುರು ರಾಜರಾವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಕಳೆದ ಮೂರು ವರ್ಷಗಳಿಂದ ಚುನಾವಣೆ ನಡೆಯದೇ ಇದ್ದರೂ ಅಜೀವ ಸದಸ್ಯತ್ವ ಇಲ್ಲದ ವ್ಯಕ್ತಿಗಳನ್ನು ಸಂಸ್ಥೆಯ ಪದಾಧಿಕಾರಿಗಳ ಸ್ಥಾನಕ್ಕೆ ತುಂಬುವ ಕಾರ್ಯ ನಡೆಯುತ್ತಿದೆ ಎಂಬ ಆರೋಪ ಅವರ ರಾಜೀನಾಮೆ ಬೆನ್ನಲ್ಲೇ ಕೇಳಿ ಬರುತ್ತಿರುವುದು ರೆಡ್‌ಕ್ರಾಸ್‌ ಸಂಸ್ಥೆಯಲ್ಲಿ ಏನೋ ನಡೆಯುತ್ತಿದೆ ಎಂಬ ಅನುಮಾನವನ್ನು ಹುಟ್ಟು ಹಾಕಿದೆ.

ಅಹಿತಕರ ಘಟನೆಗಳಿಗೆ ರಾಜೀನಾಮೆ: ಎನ್‌.ಕೆ.ಗುರುರಾಜ ರಾವ್‌, ರೆಡ್‌ಕ್ರಾಸ್‌ ಸಂಸ್ಥೆಯ ರಕ್ತ ನಿಧಿ ಕೇಂದ್ರದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದರಿಂದ ತಮ್ಮ ರಾಜೀನಾಮೆ ಅಂಗೀಕರಿಸಬೇಕೆಂದು ಕಳೆದ 2019ರ ಅಕ್ಟೋಬರ್‌ ತಿಂಗಳಲ್ಲಿ ಜಿಲ್ಲಾಧಿಕಾರಿ ಗಳಿಗೆ ಕೋರಿದ್ದು, ಅದರಂತೆ ಅದೇ ದಿನಾಂಕ ಪರಿಗಣಿಸಿ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಗುರುರಾಜ ರಾವ್‌ ರಾಜೀನಾಮೆ ಅಂಗೀಕರಿಸಿದ್ದಾರೆ.

ರೆಡ್‌ಕ್ರಾಸ್‌ನಲ್ಲಿ ಖರೀದಿಯಿಂದ ಹಿಡಿದು ಸಿಬ್ಬಂದಿಗೆ ಸಂಬಳ ನೀಡುವವರೆಗೂ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಅದಕ್ಕೆಲ್ಲಾ ನಾನು ಬಂದ ಬಳಿಕ ತಡೆಯೊಡ್ಡಿದೆ. ಕಚೇರಿಯಲ್ಲಿ ಸಿಬ್ಬಂದಿಗಳ ಕಾರ್ಯವೈಖರಿ ಸರಿಯಿಲ್ಲ. ಆ ಕಾರಣಕ್ಕಾಗಿ ಅಲ್ಲಿ ಕೆಲಸ ಮಾಡಲು ಸಾಧ್ಯ ವಾಗದೇ ರಾಜೀನಾಮೆ ಕೊಟ್ಟಿದ್ದೇನೆ ಎಂದು ಕಾರ್ಯದರ್ಶಿ ಯಾಗಿ ಕೆಲಸ ಮಾಡಿದ್ದ ಗುರುರಾಜರಾವ್‌ ತಿಳಿಸಿದರು. ಒಟ್ಟಿನಲ್ಲಿ ಬಡವರಿಗೆ, ಅಸಹಾ ಯಕರಿಗೆ ತುರ್ತು ಸಂದರ್ಭ ಗಳಲ್ಲಿ ರಕ್ತದ ಕೊರತೆ ನೀಗಿಸುತ್ತಿದ್ದ ರೆಡ್‌ಕ್ರಾಸ್‌ ಸಂಸ್ಥೆಯಲ್ಲಿ ಪದಾಧಿಕಾರಿಗಳ ನಡುವಿನ ಜಗಳ, ಖರೀದಿ ಯಲ್ಲಿ ಅಕ್ರಮದತಂಹ ಆರೋಪಗಳು ಕೇಳಿ ಬರುತ್ತಿರುವೆ.

ಚಿಕ್ಕಬಳ್ಳಾಪುರ ರೆಡ್‌ಕ್ರಾಸ್‌ ಸಂಸ್ಥೆ ಕಾರ್ಯದರ್ಶಿ ಹುದ್ದೆಗೆ ನಾನು ಅರ್ಜಿ ಹಾಕಿರಲಿಲ್ಲ. ನನ್ನ ಸಮಾಜ ಸೇವೆ ಗುರುತಿಸಿ ಕೆಲವರು ಕಾರ್ಯದರ್ಶಿ ಸ್ಥಾನಕ್ಕೆ ತಂದರು. ಆದರೆ
ಅಲ್ಲಿನ ಉಸಿರುಗಟ್ಟುವ ವಾತಾವರಣ, ಸಿಬ್ಬಂದಿಯ ಕಾರ್ಯವೈಖರಿಗೆ ಬೇಸತ್ತು ರಾಜೀನಾಮೆ ನೀಡಿದ್ದೇನೆ.
● ಎನ್‌.ಕೆ.ಗುರುರಾಜ ರಾವ್‌, ನಿಕಟಪೂರ್ವ ಕಾರ್ಯದರ್ಶಿ, ರೆಡ್‌ಕ್ರಾಸ್‌ ಸಂಸ್ಥೆ

Advertisement
Advertisement

Udayavani is now on Telegram. Click here to join our channel and stay updated with the latest news.

Next