Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚಿತ ಆರೋಗ್ಯ ತಪಾಸಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಪ್ರಥಮ ಚಿಕಿತ್ಸೆ ತರಬೇತಿ, ಲೆಡ್ ಪೊಲ್ಯೂಶನ್ ಕಾರ್ಯಾಗಾರ, ಕಿವಿ ಪರೀಕ್ಷೆ ತಪಾಸಣೆ, ಕ್ವೀಜ್ ಕಾಂಪಿಟೇಶನ್, ವಿಶ್ವ ತಂಬಾಕು ದಿನಾಚರಣೆ, ಯೋಗ ದಿನಾಚರಣೆ, ಕ್ಯಾನ್ಸರ್ ಜಾಗೃತಿ, ರಕ್ತದಾನ, ಸ್ವತ್ಛ ಭಾರತ ಸೇರಿದಂತೆ 27 ವಿಭಾಗಗಳಲ್ಲಿ 185 ಕಾರ್ಯಕ್ರಮಗಳನ್ನು 2016-17ನೇ ಸಾಲಿನಲ್ಲಿ ಬಳ್ಳಾರಿ ರೆಡ್ಕ್ರಾಸ್ ಸಂಸ್ಥೆ ಕೈಗೊಂಡಿದ್ದು, ಇದರ ಸೇವಾ ಕಾರ್ಯನಿರ್ವಹಣೆ ಮೆಚ್ಚಿ ಉತ್ತಮ ಕಾರ್ಯನಿರ್ವಹಣೆ ಜಿಲ್ಲೆ ಪ್ರಶಸ್ತಿ ನೀಡಲಾಗಿದೆ. ಇದಕ್ಕೆ ಕಾರಣರಾದ ರೆಡ್ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮಾಡುವ ಉದ್ದೇಶ ಹೊಂದಲಾಗಿದೆ. ಈ ವರ್ಷ ಬಳ್ಳಾರಿ ರೆಡ್ಕ್ರಾಸ್ ಸಂಸ್ಥೆ ವತಿಯಿಂದ ಅವಶ್ಯವಿರುವ ಕಡೆ ರಕ್ತ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ರಕ್ತ ಸಂಗ್ರಹಣಾ ಕೇಂದ್ರಗಳಿರುವ ಕಡೆಗಳಲ್ಲಿ ಅವುಗಳನ್ನು ರಕ್ತ ಬ್ಯಾಂಕ್ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
Related Articles
Advertisement
ಈ ಸಂದರ್ಭದಲ್ಲಿ ರೆಡ್ಕ್ರಾಸ್ ಸಂಸ್ಥೆಯ ಷಕೀಬ್, ಮುಖಂಡರಾದ ಡಾ| ಮಹಿಪಾಲ್, ಕೆ.ಚಂದ್ರಶೇಖರ್, ಸಾಧನಾ ಹಿರೇಮಠ, ಎಸ್ಬಿಐ ದೇವಣ್ಣ ಸೇರಿದಂತೆ ಇನ್ನಿತರರಿದ್ದರು.
ಬೀಜ-ಗೊಬ್ಬರ ದಾಸ್ತಾನು ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು, ಅವಶ್ಯಕವಿರುವ 15 ಸಾವಿರ ಟನ್ ಗೊಬ್ಬರ ಮತ್ತು 15 ಸಾವಿರ ಟನ್ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಜೂನ್ ತಿಂಗಳಲ್ಲಿ 15 ಸಾವಿರ ಟನ್ ಗೊಬ್ಬರ, ಜುಲೈ ಮತ್ತು ಮುಂದಿನ ತಿಂಗಳಲ್ಲಿ ತಲಾ 40 ಸಾವಿರ ಟನ್ ಗೊಬ್ಬರ ಅವಶ್ಯಕವಿದ್ದು, ಅದನ್ನು ಸಮರ್ಪಕವಾಗಿ ಪೂರೈಸಲು ಸೂಚನೆ ನೀಡಲಾಗಿದೆ. ಈಗಾಗಲೇ ರಸಗೊಬ್ಬರ ಕಂಪನಿಗಳ ಡೀಲರ್ಗಳು, ರಸಗೊಬ್ಬರ ಸರಬರಾಜು ಗುತ್ತಿಗೆದಾರರು ಮತ್ತು ಲಾರಿ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ.
ರೈತರಿಗೆ ರಸಗೊಬ್ಬರ ಪೂರೈಕೆ ವಿಷಯದಲ್ಲಿ ಯಾವುದೇ ಸಮಸ್ಯೆಗಳು ಉಂಟಾದರೆ ಅವಶ್ಯಕ ವಸ್ತು ಕಾಯ್ದೆ ಅಡಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ ನೀಡಿದರು.