Advertisement

ಉಗ್ರಗಾಮಿ ಸಂಘಟನೆಗಳಿಗೆ ಯುವಕರ ನೇಮಕಾತಿ: ಹಲವು ಪುರಾವೆಗಳು ಪತ್ತೆ : ಓರ್ವ ಪೊಲೀಸ್‌ ವಶಕ್ಕೆ

11:08 PM Mar 06, 2024 | Team Udayavani |

ಕಾಸರಗೋಡು: ದೆಹಲಿ ಕೇಂದ್ರೀಕರಿಸಿ ಉಗ್ರಗಾಮಿ ಸಂಘಟನೆಗಳಿಗೆ ಯುವಕರನ್ನು ಸೇರ್ಪಡೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಜೇಶ್ವರದ ಕುರುಡಪದವು ಮತ್ತು ಬೇಡಡ್ಕದ ಸಮೀಪದ ಪಡುಪ್ಪುನಲ್ಲಿ ನಡೆಸಿದ ದಾಳಿಯಲ್ಲಿ ಹಲವು ನಿರ್ಣಾಯಕ ಪುರಾವೆಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

Advertisement

ಇದಕ್ಕೆ ಸಂಬಂಧಿ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕುರುಡಪದವು ಮತ್ತು ಪಡುಪ್ಪುನ ಎರಡು ಮನೆಗಳಿಗೆ ಎನ್‌.ಐ.ಎ. ದಾಳಿ ನಡೆಸಿ ತಪಾಸಣೆ ನಡೆಸಿದೆ. ಈ ಮನೆಗಳಿಂದ ಮೊಬೈಲ್‌ ಫೋನ್‌, ಪೆನ್‌ಡ್ರೈವ್‌, ಸಿಮ್‌ ಕಾರ್ಡ್‌ಗಳು, ಆಧಾರ್‌ ಕಾರ್ಡ್‌ ಇತ್ಯಾದಿಗಳನ್ನು ವಶಪಡಿಸಿಕೊಂಡಿದೆ.

ಪಡುಪ್ಪುನಲ್ಲಿ ಟ್ರಾವೆಲ್‌ ಏಜೆನ್ಸಿ ನಡೆಸುವ ವ್ಯಕ್ತಿಯೋರ್ವನನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದೆ. ಈತನ ಮನೆ ಮತ್ತು ಟ್ರಾವೆಲ್‌ ಏಜೆನ್ಸಿ ಸಂಸ್ಥೆಯಲ್ಲೂ ಎನ್‌ಐಎ ಶೋಧ ನಡೆಸಿದೆ. ಬೆಂಗಳೂರನ್ನು ಕೇಂದ್ರೀಕರಿಸಿ ಈ ಹಿಂದೆ ನಡೆದ ಹವಾಲಾ ಹಣ ಜಾಲದೊಂದಿಗೆ ಈ ಪ್ರಕರಣ ನಂಟು ಹೊಂದಿದೆಯೇ ಎಂಬ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next