Advertisement

ಕೋವಿಡ್‌ ಕೇರ್‌ಗೆ ದಾಖಲಿಸಿ

06:54 PM May 30, 2021 | Team Udayavani |

ಯಳಂದೂರು: ಗ್ರಾಮಗಳಲ್ಲಿ ಸೋಂಕಿತ ರನ್ನು ಹೋಂ ಐಸೋಲೇಷನ್‌ಬದಲು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸೋಂಕಿತರನ್ನು ದಾಖಲಿಸಬೇಕು.ಇದಕ್ಕೆ ಜನಪ್ರತಿನಿಧಿಗಳು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ತಿಳಿಸಿದರು.

Advertisement

ಪಟ್ಟಣದ ಸೇರಿದಂತೆ ತಾಲೂಕಿನಗುಂಬಳ್ಳಿ, ಗೌಡಹಳ್ಳಿ, ಯರಿಯೂರು,ಮದ್ದೂರು ಗ್ರಾಪಂನಲ್ಲಿ ನಡೆದಕೋವಿಡ್‌ ನಿಯಂತ್ರಣ ಸಭೆಯಲ್ಲಿಮಾತ ನಾಡಿದ ಅವರು, ಜಿಲ್ಲೆಯಲ್ಲಿಸಾಮಾನ್ಯ ತಲೆನೋವು, ನೆಗಡಿ, ಜ್ವರ,ಕೆಮ್ಮು ಬಂದರೂ ಕೆಲವರು ಖಾಸಗಿಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದು ಅಲ್ಲಿಗುಣವಾಗದಿದ್ದಾಗ ಅಥವಾ ಆಮ್ಲ ಜನಕದ ಪ್ರಮಾಣ ಕಡಿಮೆಯಾಗಾಗ ಸರ್ಕಾರಿ ಆಸ್ಪತ್ರೆಗೆ ಬರುವುದರಿಂದಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ.

ಜಿಲ್ಲೆಯಲ್ಲಿ ಮರಣ ಪ್ರಮಾಣ ಶೇ.12ರಷ್ಟಿದ್ದು ಇದರಲ್ಲಿ ಐಸಿಯುನ ಪ್ರಮಾಣಶೇ.43 ರಷ್ಟಿದೆ. ಇದನ್ನು ತಡೆಗಟ್ಟಲುಕ್ರಮ ವಹಿಸಲಾಗಿದೆ ಎಂದರು.ಸರ್ಕಾರ 1010 ಹೊಸ ವೈದ್ಯರನ್ನುನೇಮಕ ಮಾಡಿಕೊಳ್ಳಲಾಗಿದ್ದು. ಚಾಮರಾಜ ನಗರ ಜಿಲ್ಲೆಗೂ 16 ಹೊಸ ವೈದ್ಯರುನೇಮಕಗೊಂಡಿದ್ದಾರೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ 1900 ಬೆಡ್‌ಗಳ ಕೋವಿಡ್‌ ಆಸ್ಪತ್ರೆಗಳು ಇದ್ದು ಇನ್ನು1025 ಹೆಚ್ಚುವರಿ ಬೆಡ್‌ಗಳಿಗೂಯೊಜನೆ ರೂಪಿಸಲಾಗಿದೆ. ಜಿಲ್ಲೆಯ503 ಕಂದಾಯ ಗ್ರಾಮಗಳಲ್ಲಿ 174ಗ್ರಾಮಗಳು ಕೋವಿಡ್‌ ಮುಕ್ತವಾಗಿವೆ ಎಂದರು. ಶಾಸಕ ಎನ್‌. ಮಹೇಶ್‌ಮಾತನಾಡಿ, ಮನೆಗಳಲ್ಲಿ ಪ್ರತ್ಯೇಕಕೊಠಡಿ, ಶೌಚಗೃಹ ಇದ್ದರೆ ಮಾತ್ರಹೋಂ ಐಸೋಲೇಷನ್‌ನಲ್ಲಿರ ಬೇಕು.ಇಲ್ಲದಿದ್ದರೆ ಕೋವಿಡ್‌ ಕೇರ್‌ ಸೆಂಟರ್‌ಗೆದಾಖಲಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next