Advertisement

ಸಿಎಂ ಭೇಟಿಯಾಗಿ ಮೊಳಕಾಲ್ಮೂರು ಕೈ ಟಿಕೆಟ್‌ ಕೇಳಿದ ತಿಪ್ಪೇಸ್ವಾಮಿ 

01:35 PM Apr 17, 2018 | Team Udayavani |

ಮೈಸೂರು: ಟಿಕೆಟ್‌ ಕೈತಪ್ಪಿದುದರಿಂದ ಸಂಸದ ಶ್ರೀರಾಮುಲು ವಿರುದ್ಧ ಬಂಡೆದ್ದಿರುವ ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಅವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ ಟಿಕೆಟ್‌ ಪಡೆಯುವ ವಿಫ‌ಲ ಯತ್ನ ನಡೆಸಿದರು.

Advertisement

ಟಿ.ಕೆ.ಬಡಾವಣೆಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ತಿಪ್ಪೇಸ್ವಾಮಿ ಅವರು ಕೆಲ ಕಾಲ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು. 

ಮಾತುಕತೆಯ ಕುರಿ ತಾಗಿ ಪತ್ರಕರ್ತರು ಸಿಎಂ ಬಳಿ  ಪ್ರಶ್ನಿಸಿದಾಗ ‘ತಿಪ್ಪೇಸ್ವಾಮಿ ಅವರು ಕಾಂಗ್ರೆಸ್‌ ಟಿಕೆಟ್‌ ಕೇಳಿದ್ದಾರೆ. ಕಾಲ ಮಿಂಚಿ ಹೋಗಿದೆ. ಟಿಕೆಟ್‌ ಕೊಡುವುದು ಸಾಧ್ಯವಿಲ್ಲ ಎಂದಿದ್ದೇನೆ. ನಾವು ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದೇವೆ’ ಎಂದರು. 

ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ಬಿ.ಶ್ರೀರಾಮುಲು ಅವರನ್ನು ಸೋಲಿಸಲು ತಿಪ್ಪೇಸ್ವಾಮಿ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. 

ಮೊಳಕಾಲ್ಮೂರಿನಲ್ಲಿ ಕಾಂಗ್ರೆಸ್‌ ಈಗಾಗಲೆ ಡಾ. ಬಿ. ಯೋಗೇಶ್‌ ಬಾಬು ಅವರಿಗೆ ಟಿಕೆಟ್‌ ನೀಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next