Advertisement

Really sorry ; ಲಂಕನ್ನರ ಕ್ಷಮೆಯಾಚಿಸಿದ ನಾಯಕ ದಸುನ್‌ ಶಣಕ

10:44 PM Sep 17, 2023 | Team Udayavani |

ಕೊಲಂಬೊ : ಭಾರತ ವಿರುದ್ಧದ ಏಷ್ಯಾ ಕಪ್ ಫೈನಲ್‌ನಲ್ಲಿ ಹೀನಾಯ ನಿರ್ವಹಣೆ ತೋರಿದುದ್ದಕ್ಕಾಗಿ ಶ್ರೀಲಂಕಾ ತಂಡದ ನಾಯಕ ದಸುನ್‌ ಶಣಕ ಅವರು ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

Advertisement

ನೀರಸ ಪ್ರದರ್ಶನ, ತಂಡದ 10 ವಿಕೆಟ್‌ಗಳ ಸೋಲಿನ ನಂತರ ನಿರುತ್ಸಾಹಗೊಂಡುದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಮುಖ ಫೈನಲ್‌ನಲ್ಲಿ ಸೋತ ಬಳಿಕ ಶ್ರೀಲಂಕಾ ತಂಡವನ್ನು ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರೇಕ್ಷಕರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.

ಪಂದ್ಯದ ಬಳಿಕ ಪ್ರಸ್ತುತಿ ವೇಳೆ ” ಭಾರಿ ಸಂಖ್ಯೆಯಲ್ಲಿ ಬಂದ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ನಾವು ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ. ಕ್ರಿಕೆಟಿಗರಾದ ನಾವು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತೇವೆ. ಬ್ರ್ಯಾಂಡೆಡ್ ಕ್ರಿಕೆಟ್ ಆಡುತ್ತಿರುವ ಭಾರತ ತಂಡಕ್ಕೆ ಅಭಿನಂದನೆಗಳು” ಎಂದು ಹೇಳಿದ್ದಾರೆ.

ಸಿರಾಜ್ ಅವರ ಅಸಾಧಾರಣ ಪ್ರದರ್ಶನದಿಂದಾಗಿ ಏಳು ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದರು. ಶ್ರೀಲಂಕಾ ಕೇವಲ 15.2 ಓವರ್‌ಗಳಲ್ಲಿ ಕೇವಲ 50 ರನ್‌ಗಳಿಗೆ ಆಲೌಟ್ ಆಯಿತು, ಉತ್ತರವಾಗಿ ಭಾರತ ಕೇವಲ 37 ಎಸೆತಗಳಲ್ಲಿ 10 ವಿಕೆಟ್‌ಗಳ ಅಂತರದಲ್ಲಿ ಗುರಿ ಮುಟ್ಟಿತು. ಇನಿಂಗ್ಸ್‌ನಲ್ಲಿ ಉಳಿದಿರುವ ಚೆಂಡುಗಳ ಸಂಖ್ಯೆಯಿಂದ ಇದು ಭಾರತಕ್ಕೆ ಅತಿದೊಡ್ಡ ಜಯವಾಗಿದೆ ಮತ್ತು ಶ್ರೀಲಂಕಾಕ್ಕೆ ಅತಿದೊಡ್ಡ ಸೋಲು ಕೂಡ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next