Advertisement

ಏಕನಾಥ್‌ ಶಿಂಧೆ ಬಣ್ಣ ನಿಜವಾದ ಶಿವಸೇನೆ: ಸಚಿವ ರಾಮದಾಸ್‌ ಅಠವಳೆ

05:53 PM Sep 05, 2022 | Team Udayavani |

ಮುಂಬಯಿ: ಏಕನಾಥ್‌ ಶಿಂಧೆ ಬಣ್ಣವು ನಿಜವಾದ ಶಿವಸೇನೆ ಆಗಿದ್ದು , ಅವರಿಗೆ ದಾದರ್‌ನಲ್ಲಿ ದಸರಾ ಕೂಟ ಆಯೋಜನೆಗೆ ಅನುಮತಿ ದೊರೆಯಬೇಕು. ಉದ್ಧವ್‌ ಠಾಕ್ರೆ ಅವರು ಬಿಕೆಸಿ ಅಥವಾ ಬೇರೆಲ್ಲಿಯೂ ದಸರಾ ಕೂಟ ನಡೆಸಬಹುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್‌ ಅಠವಳೆ ಸಲಹೆ ನೀಡಿದರು.

Advertisement

ಇಂದು ಖಾಸಗಿ ಕೆಲಸದ ನಿಮಿತ್ತ ಕಲ್ಯಾಣ್‌ ಪಶ್ಚಿಮ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ರಾಜ್ಯ ಸಚಿವ ರಾಮದಾಸ್‌ ಅಠವಳೆ ಅವರು, ಈ ಸಂದರ್ಭದಲ್ಲಿ ದಸರಾ ಮೇಳದ ಕುರಿತು ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಅವರು ಉದ್ಧವ್‌ ಠಾಕ್ರೆಗೂ ಸವಾಲು ಹಾಕಿದರು. ರಿಕ್ಷಾ ಚಾಲಕರಿಂದ ಶಿವಸೇನೆ ಹೆಚ್ಚಿದೆ. ಶಿಂಧೆ ಗುಂಪಿನವರನ್ನು ಅವಮಾನಿಸುವುದು ಸರಿಯಲ್ಲ ಎಂದು ಅಠವಳೆ ಅವರ ಪರ ನಿಂತರು. ಶಿವಸೇನೆಯ ಮೂರನೇ ಎರಡರಷ್ಟು ಶಾಸಕರು ಏಕನಾಥ್‌ ಶಿಂಧೆ ಅವರೊಂದಿಗೆ ಇದ್ದಾರೆ.

ಹೀಗಾಗಿ ದಾದರ್‌ನಲ್ಲಿ ದಸರಾ ಕೂಟದ ನಡೆಸಲು ಮನಪಾ ಶಿಂಧೆ ಬಣ್ಣಕ್ಕೆ ಅವಕಾಶ ನೀಡಬೇಕು. ಆದರೆ ಉದ್ಧವ್‌ ಠಾಕ್ರೆ ಅವರು ರಿಕ್ಷಾ ಚಾಲಕರನ್ನು ಅವಮಾನ ಮಾಡುವುದು ಸರಿಯಲ್ಲ ಎಂದು ರಾಮದಾಸ್‌ ಅಠವಳೆ ಹೇಳಿದರು.

ಮುಂಬಯಿ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಎಂಎನ್‌ಎಸ್‌ ಅನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ರಾಜ್‌ ಠಾಕ್ರೆ ಅವರನ್ನು ಕರೆದುಕೊಂಡು ಹೋದರೆ ಬಿಜೆಪಿ ಸೋಲಬಹುದು, ಅವರಿಗೆ ಗುಜರಾತಿನವರ, ಉತ್ತರ ಭಾರತೀಯರ, ದಕ್ಷಿಣ ಭಾರತೀಯರ ಮತಗಳು ಸಿಗುವುದಿಲ್ಲ. ಮನಪಾ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷ ಮತ್ತು ಏಕನಾಥ್‌ ಶಿಂಧೆ ಅವರ ಶಿವಸೇನೆ ಬಿಜೆಪಿಯೊಂದಿಗೆ ಇವೆ ಎಂದು ರಾಮದಾಸ್‌ ಅಠವಳೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next