Advertisement

ಬಗ್ಗಿದ ಚೀನಾ; ನಾಥುಲಾ ಪಾಸ್ ಬಗ್ಗೆ ಭಾರತದ ಜತೆ ಮಾತುಕತೆಗೆ ಸಿದ್ಧ!

03:04 PM Sep 12, 2017 | Team Udayavani |

ಬೀಜಿಂಗ್: ಭಾರತ ಜತೆಗಿನ ಡೋಕ್ಲಾಮ್ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡ ಬೆನ್ನಲ್ಲೇ, ಚೀನಾ ಮಂಗಳವಾರ ಭಾರತೀಯ ಯಾತ್ರಾರ್ಥಿಗಳಿಗೆ ಮಾನಸ ಸರೋವರಕ್ಕೆ ತೆರಳಲು ನಾಥುಲಾ ಪಾಸ್ ಮಾರ್ಗದ  ಮೂಲಕ ಅವಕಾಶ ನೀಡುವ ಬಗ್ಗೆ ಮಾತುಕತೆ ನಡೆಸಲು ಸಿದ್ಧ ಎಂದು ತಿಳಿಸಿದೆ.

Advertisement

ಇತ್ತೀಚೆಗೆ ನಾಥುಲಾ ಪಾಸ್ ಮೂಲಕ ಮಾನಸ ಸರೋವರ ಯಾತ್ರೆಗೆ ಹೊರಟಿದ್ದ ಭಾರತದ ಯಾತ್ರಿಕರಿಗೆ ಚೀನಾ ಪ್ರವೇಶ ನಿಷೇಧಿಸಿ ತಡೆಯೊಡ್ಡಿತ್ತು.

ನಾಥುಲಾ ಪಾಸ್ ಮಾರ್ಗವನ್ನು ತೆರೆಯುವ ಬಗ್ಗೆ ಚೀನಾ ಭಾರತದ ಜತೆ ಮಾತುಕತೆ ನಡೆಸಲು ತಯಾರಾಗಿದೆ. ಅಲ್ಲದೇ ಭಾರತೀಯ ಯಾತ್ರಾರ್ಥಿಗಳಿಗೆ ಸಂಬಂಧಪಟ್ಟ ಇತರ ಸಮಸ್ಯೆಗಳ ಬಗ್ಗೆಯೂ ಸಮಾಲೋಚನೆ ನಡೆಸಲು ಸಿದ್ದವಾಗಿರುವುದಾಗಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುಂಗ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next