Advertisement

ತ್ಯಾಗಕ್ಕೆ ಸಿದ್ಧ: ಕೆ.ಎಸ್‌.ಈಶ್ವರಪ್ಪ

10:54 PM Dec 14, 2019 | Team Udayavani |

ಶಿವಮೊಗ್ಗ: ಬಿಜೆಪಿ ಸರ್ಕಾರ ಅಧಿ ಕಾರಕ್ಕೆ ಬರಲು ಸಹಕರಿಸಿದ ಮತ್ತು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದವರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಅವರ ಋಣ ತೀರಿಸಲಾಗುವುದು. ಹಾಗೆ ಮಾಡುವಾಗ ನನ್ನನ್ನೂ ಸೇರಿಕೊಂಡು ಕೆಲವರು ಸಚಿವ ಸ್ಥಾನ ತ್ಯಾಗ ಮಾಡಬೇಕಾಗಿಯೂ ಬರಬಹುದು. ಇದಕ್ಕೆ ನಾನು ಸಿದ್ಧನಾಗಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನಕ್ಕೂ, ಬಿಜೆಪಿಗೂ ಸಂಬಂಧವಿಲ್ಲ.

Advertisement

ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿ ಎಂಬ ಭಿನ್ನಾಭಿಪ್ರಾಯವಿಲ್ಲ. ಸಂಘಟನೆ ಬಲದಿಂದಲೇ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದೇವೆ. ಮಂತ್ರಿಮಂಡಲ ವಿಸ್ತರಣೆಗೆ ಸಂಬಂಧಿ ಸಿದಂತೆ ಯಾವ ಬದಲಾವಣೆಯಾದರೂ ಆಗಬಹುದು. ಇದಕ್ಕಾಗಿ ಯಾರಿಗೂ ಅಸಮಾಧಾನವಾಗುವುದಿಲ್ಲ. ಒಟ್ಟಾರೆ ಸುಭದ್ರ ಸರ್ಕಾರ ಬಿಜೆಪಿ ಗುರಿ ಎಂದರು. ಈಗ ಶರತ್‌ ಬಚ್ಚೇಗೌಡ ಅವರ ಅವಶ್ಯಕತೆ ನಮಗಿಲ್ಲ. ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next