Advertisement

ಶೂಟಿಂಗ್‌ಗೆ ರೆಡಿ ಆದ್ರು ದರ್ಶನ್‌

11:08 AM Nov 21, 2018 | |

ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಕಾರು ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್‌, ಆಸ್ಪತ್ರೆಯಿಂದ ಡಿಸಾcರ್ಜ್‌ ಆಗುವ ವೇಳೆ, “ಹೆಚ್ಚು ದಿನ ವಿಶ್ರಾಂತಿ ಪಡೆಯುವುದಿಲ, ಬೇಗನೇ ವಾಪಸ್‌ ಆಗುತ್ತೇನೆ’ ಎಂದು ಹೇಳಿದ್ದರು. ಈಗ ಅದರಂತೆ ದರ್ಶನ್‌ ಗುಣಮುಖರಾಗಿ, ಮತ್ತೆ ಬಣ್ಣ ಹಚ್ಚುವ ಸಿದ್ಧತೆಯಲ್ಲಿದ್ದಾರೆ. ಅವರ ಕೈಗೆ ಹಾಕಿದ ಬ್ಯಾಂಡೆಜ್‌ ಬಿಚ್ಚಲಾಗಿದ್ದು, ಮತ್ತೆ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ.

Advertisement

ಹಾಗಂತ ದರ್ಶನ್‌ ಯಾರಿಗೂ ಸಿಗದೇ ಮನೆಯಲ್ಲಿ ಕುಳಿತಿರಲಿಲ್ಲ. ತಮ್ಮನ್ನು ಆಹ್ವಾನಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೇ ಇದ್ದ ದರ್ಶನ್‌, ಸಿನಿಮಾದಲ್ಲಿ ನಟಿಸಿರಲಿಲ್ಲ. ಈಗ ದರ್ಶನ್‌ ಮತ್ತೆ ಫಿಟ್‌ ಅಂಡ್‌ ಫೈನ್‌ ಆಗಿದ್ದು, ಅವರ “ಯಜಮಾನ’ ಚಿತ್ರದ ಚಿತ್ರೀಕರಣ ಕೂಡಾ ಆರಂಭವಾಗುತ್ತಿದೆ.

ಈಗಾಗಲೇ “ಯಜಮಾನ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳು ಬಾಕಿ ಇವೆ. ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಇಂದು ಸ್ವೀಡನ್‌ಗೆ ತೆರಳುತ್ತಿದೆ. ಅಲ್ಲಿನ ಸುಂದರ ತಾಣಗಳಲ್ಲಿ ಹಾಡುಗಳ ಚಿತ್ರೀಕರಣ ನಡೆಸಲಿದೆ. ದರ್ಶನ್‌ “ಯಜಮಾನ’ ಮುಗಿಸಿಕೊಂಡು “ಒಡೆಯ’ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದು, ಡಿಸೆಂಬರ್‌ 10 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next