Advertisement

ತೆರೆಮರೆಯಲ್ಲಿ ಸಿದ್ಧವಾಗುತ್ತಿದೆ “ದಾಮಾಯಣ’ 

05:41 AM Mar 19, 2019 | |

ಕರಾವಳಿಯ ಬಹುತೇಕ ಹೊಸ ಪ್ರತಿಭೆಗಳ ಪರಿಶ್ರಮದಿಂದ ‘ದಾಮಾಯಣ’ ಎನ್ನುವ ಹೆಸರಿನ ಚಿತ್ರವೊಂದು ತಯಾರಾಗುತ್ತಿದೆ. ಮೂರ್ಖನೊಬ್ಬನ ಬಯಕೆ ಹಾಗೂ ವಾಸ್ತವತೆಯ ನಡುವಿನ ವ್ಯತ್ಯಾಸದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಬುಟ್ಟಿಸ್ಟೋರ್‌ ಡಾಟ್‌ ಕಾಮ್‌ನ ನಿರ್ಮಾತೃ ಯುವ ಉದ್ಯಮಿ ಶ್ರೀಮುಖ ಈ ವಿಭಿನ್ನ ಶಿರ್ಷಿಕೆಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. 

Advertisement

ಕೆಲ ತಿಂಗಳ ಹಿಂದೆ ಸೆಟ್ಟೇರಿದ್ದ, ದಕ್ಷಿಣ ಕನ್ನಡದ ಭಾಷಾ ಸೊಗಡಿನ ಈ ಚಿತ್ರವನ್ನು ಮಂಗಳೂರು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಸನ್ನಿವೇಶಗಳಿಗನುಗುಣವಾಗಿ ಒಟ್ಟು ಐದು ಹಾಡುಗಳಿದ್ದು, ಕೀರ್ತನ್‌ ಬಾಳಿಗ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸಿದ್ದು ಜಿ. ಎಸ್‌ ಮತ್ತು ಕಾರ್ತಿಕ್‌ ಕೆ. ಎಮ್‌ ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. “ಸೆವೆಂಟಿ ಸೆವೆನ್‌ ಸ್ಟುಡಿಯೋಸ್‌’ ಬ್ಯಾನರ್‌ನಲ್ಲಿ ರಾಘವೇಂದ್ರ ಕುಡ್ವ ಚಿತ್ರವನ್ನು ನಿರ್ಮಿಸುತ್ತಿದ್ದು, ಅಕ್ಷಯ್‌ ರೇವಣರ್‌ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಸದ್ಯ ‘ದಾಮಾಯಣ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮಹಂತದಲ್ಲಿದ್ದು, ಇದೇ ತಿಂಗಳಾಂತ್ಯಕ್ಕೆ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡುವ ಯೋಜನೆ ಹಾಕಿಕೊಂಡಿದೆ. ಚಿತ್ರತಂಡದ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ, ಮುಂದಿನ ಆಗಸ್ಟ್‌ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆ ಚಿತ್ರತಂಡದ್ದು. 

Advertisement

Udayavani is now on Telegram. Click here to join our channel and stay updated with the latest news.

Next