Advertisement

ವಿಮೋಚನಾ ದಿನಾಚರಣೆಗೆ ಮರು ನಾಮಕರಣ ಇಕ್ಕಟ್ಟು!

10:45 PM Sep 11, 2019 | Team Udayavani |

ಕಲಬುರಗಿ: ಹೈದ್ರಾಬಾದ್‌ ಕರ್ನಾಟಕ ಭಾಗವನ್ನು “ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿದ್ದರಿಂದ ಸೆ.17ರಂದು ಆಚರಿಸುತ್ತಿದ್ದ “ಹೈಕ ವಿಮೋಚನಾ ದಿನಾಚರಣೆ’ ಆಚರಿಸಬೇಕೇ ಬೇಡವೇ ಎಂಬ ಗೊಂದಲ ಏರ್ಪಟ್ಟಿದೆ. ಹೈದ್ರಾಬಾದ್‌ ನಿಜಾಮರಿಂದ ಮುಕ್ತಿ ಪಡೆದಿದ್ದರಿಂದ ಸ್ವಾತಂತ್ರೊತ್ಸವ ಮಾದರಿಯಲ್ಲೇ ಹೈ-ಕ ವಿಮೋಚನಾ ದಿನ ಆಚರಿಸಲಾಗುತ್ತಿತ್ತು. ಆದರೆ, ಮರು ನಾಮಕರಣದಿಂದ “ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ ಆಚರಿಸುವಂತಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈಕ ವಿಮೋಚನಾ ದಿನಾಚರಣೆ ಸಮಿತಿ ಅಧ್ಯಕ್ಷ ಶಶೀಲ ನಮೋಶಿ, “ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿದ್ದು ಸ್ವಾಗತಾರ್ಹ. ಸೆ.17ರಂದು ಈ ಬಗ್ಗೆ ಸಮಿತಿ ಸಭೆ ನಡೆಸಲಿದೆ. ನಂತರ ಸರ್ಕಾರದೊಂದಿಗೆ ಸಮಾಲೋಚನೆ ಮಾಡಲಾಗುವುದು. ಅಲ್ಲದೇ ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಪ್ರತಿ ವರ್ಷವೂ ಸರ್ಕಾರದಿಂದಲೇ “ವಿಮೋಚನಾ ಉತ್ಸವ’ ಆಚರಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next