Advertisement

ಕೆಲಸಕ್ಕೆ ಸೇರಿಸದಿದ್ದರೆ ದಾಖಲೆ ಬಹಿರಂಗ : ಮೇಟಿ ರಾಸಲೀಲೆ ಸಂತ್ರಸ್ತೆ

06:20 AM Jul 19, 2017 | Karthik A |

ಬಾಗಲಕೋಟೆ: ಜಿಲ್ಲಾ ಆಯುಷ್‌ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರಿತ ಅಟೆಂಡರ್‌ ಆಗಿದ್ದ ನನ್ನನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಲಿಖೀತ ಮನವಿ ಕೊಟ್ಟಿದ್ದೇನೆ. ನಾಳೆ ಹೊತ್ತಿಗೆ ಪುನಃ ಕೆಲಸಕ್ಕೆ ಸೇರಿಸಿಕೊಂಡರೆ ಸರಿ. ಇಲ್ಲದಿದ್ದರೆ ನನಗೆ ಆದ ಅನ್ಯಾಯ-ಬೆದರಿಕೆ ಎಲ್ಲವನ್ನೂ ದಾಖಲೆ ಸಮೇತ ಮಾಧ್ಯಮಗಳ ಎದುರು ಬಹಿರಂಗಪಡಿಸುತ್ತೇನೆ ಎಂದು ಮಾಜಿ ಸಚಿವ ಎಚ್‌.ವೈ. ಮೇಟಿ ರಾಸ ಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ ಸಂತ್ರಸ್ತೆ ಎಚ್ಚರಿಕೆ ನೀಡಿದ್ದಾರೆ.

Advertisement

ಮಂಗಳವಾರ ಪುನಃ ಆಯುಷ್‌ ಆಸ್ಪತ್ರೆಗೆ ತೆರಳಿ, ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲು ಸೋಮವಾರ ನೀಡಿದ್ದ ಲಿಖೀತ ಮನವಿ ಕುರಿತು ವಿಚಾರಿಸಿ, ಈ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ನನ್ನ ಬಳಿ ಹಲವು ದಾಖಲೆಗಳಿವೆ. ನಾನು ಇಷ್ಟು ದಿನ ಎಲ್ಲಿದ್ದೆ, ಯಾರು ನನಗೆ ಅನ್ಯಾಯ ಮಾಡಿದ್ದಾರೆ ಎಂಬುದು ಸೇರಿ ಆಯುಷ್‌ ಆಸ್ಪತ್ರೆಯಲ್ಲಿ ನಡೆದ ಅವ್ಯವಹಾರ ಬಿಚ್ಚಿಡುವುದಾಗಿ ಬೆದರಿಕೆಯೊಡ್ಡಿದ್ದಾರೆ. 2011ರಿಂದ ಆಯುಷ್‌ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ಸಂತ್ರಸ್ತೆ 8 ತಿಂಗಳಿಂದ ಅನಾರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಯಿಂದ ಗೈರಾಗಿದ್ದು, ಪುನಃ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಮಹೇಶ ಗುಗ್ಗರಿ, ಗುತ್ತಿಗೆ ಆಧಾರದ ಸಿಬಂದಿ ಆಗಿದ್ದರಿಂದ ಜಿಲ್ಲಾಧಿಕಾರಿಗಳ ಆದೇಶ ಬರಬೇಕು. ಈಗಾಗಲೇ ಅವರಿಗೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿ ಮುಂದಿನ ನಿರ್ದೇಶನದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next