Advertisement

ಬೆಂಗಳೂರಿನಲ್ಲಿ ಆರ್‌ಸಿಬಿ ಅಭ್ಯಾಸ ಶಿಬಿರ ಆರಂಭ

12:30 AM Feb 05, 2019 | |

ಬೆಂಗಳೂರು: ಐಪಿಎಲ್‌ 12ನೇ ಆವೃತ್ತಿಗೆ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ದಿನದ ತರಬೇತಿ ಶಿಬಿರವನ್ನು ಆರಂಭಿಸಿದೆ.

Advertisement

ಕೋಚ್‌ ಗ್ಯಾರಿ ಕರ್ಸ್ಟನ್‌ ಹಾಗೂ ಆಶಿಷ್‌ ನೆಹ್ರಾ ತಂಡದ ಆಟಗಾರರಿಗೆ ಸೂಕ್ತ, ಸಲಹೆ ಸೂಚನೆ ನೀಡುತ್ತಿದ್ದಾರೆ. ವಾಷಿಂಗ್ಟನ್‌ ಸುಂದರ್‌, ಆಕಾಶ್‌ದೀಪ್‌ ನಾಥ್‌, ದೇವದತ್ತ ಪಡೀಕ್ಕಲ್‌, ಗುರುಕೀರ್ತ್‌ ಸಿಂಗ್‌, ಹಿಮ್ಮತ್‌ ಸಿಂಗ್‌, ಕುಲ್ವಂತ್‌, ಮಿಲಿಂದ್‌ ಕುಮಾರ್‌, ಪ್ರಯಾಸ್‌ ಬರ್ಮನ್‌ ಹಾಗೂ ಶಿವಂ ದುಬೆ ಶಿಬಿರದಲ್ಲಿರುವ ಆಟಗಾರರಾಗಿದ್ದಾರೆ. 

ಆಟಗಾರರಿಗೆ ಫಿಟೆ°ಸ್‌ ಕಾಪಾಡಿಕೊಳ್ಳುವುದು, ಯೋ ಯೋ ಟೆಸ್ಟ್‌ನಲ್ಲಿ ಭಾಗವಹಿಸುವ ಕುರಿತಂತೆ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ. ಇನ್ನೂ ಐಪಿಎಲ್‌ ವೇಳಾಪಟ್ಟಿ ಪ್ರಕಟವಾಗಿಲ್ಲ. ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ಶೀಘ್ರದಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next