Advertisement

ಊರ್ಜಿತ್‌ ರಾಜೀನಾಮೆಯಿಂದ ಆಕ್ರೋಶ

06:00 AM Dec 11, 2018 | Team Udayavani |

ಮುಂಬಯಿ: ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆ ನೀಡುತ್ತಿದ್ದಂತೆ ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿದ್ದು, ಸ್ವಾಯತ್ತ ಸಂಸ್ಥೆಗಳನ್ನು ಹತ್ತಿಕ್ಕಲು ಮೋದಿ ಸರಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಇದುವೇ ಸಾಕ್ಷಿ ಎಂದು ಆರೋಪಿಸಿವೆ.
ವಿಪಕ್ಷಗಳ ಆರೋಪಗಳಿಗೆ ಸರಕಾರವಾಗಲೀ, ಬಿಜೆಪಿ ನಾಯಕರಾಗಲೀ ಯಾವುದೇ ಪ್ರತ್ರಿಕ್ರಿಯೆ ನೀಡಿಲ್ಲ. ಆದರೆ, ಊರ್ಜಿತ್‌ ಪಟೇಲ್‌ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರು ಟ್ವೀಟ್‌ ಮಾಡಿದ್ದಾರೆ.

Advertisement

ಊರ್ಜಿತ್‌ ರಾಜೀನಾಮೆ ಬಳಿಕ ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ ಮೋದಿ, ಹಳಿತಪ್ಪಿದ್ದ ಬ್ಯಾಂಕಿಂಗ್‌ ವ್ಯವಸ್ಥೆ ಯನ್ನು ಊರ್ಜಿತ್‌ ಪಟೇಲ್‌ ಅವರು ಸರಿದಾರಿಗೆ ತಂದಿದ್ದಾರೆ. ಅಲ್ಲದೆ, ವ್ಯವಸ್ಥೆಯಲ್ಲಿ ಶಿಸ್ತು ಮೂಡುವಂತೆ ಮಾಡಿದ್ದಾರೆ. ಆರ್ಥಿಕ ವಿಚಾರಗಳನ್ನು ಅರೆದು ಕುಡಿದಿರುವಂಥ ಶ್ರೇಷ್ಠ ವ್ಯಕ್ತಿ. ಅವರ ನಾಯಕತ್ವ ದಲ್ಲಿ ಆರ್‌ಬಿಐ ಆರ್ಥಿಕ ಸ್ಥಿರತೆಯನ್ನು ಸಾಧಿಸಿತು ಎಂದು ಹೊಗಳಿದ್ದಾರೆ. ಅಲ್ಲದೆ, ಅವರನ್ನು ನಾವು ತುಂಬಾ ಮಿಸ್‌ ಮಾಡಿ ಕೊಳ್ಳುತ್ತೇವೆ ಎಂದೂ ಹೇಳಿದ್ದಾರೆ.

ಕಾಂಗ್ರೆಸ್‌ ಟೀಕೆ: ಊರ್ಜಿತ್‌ ಪಟೇಲ್‌ ರಾಜೀನಾಮೆಯಿಂದ ಬೇಸರವಾಗಿದೆ ವಿನಾ ಅಚ್ಚರಿಯಾಗಿಲ್ಲ. ಆತ್ಮಾಭಿಮಾನ ವಿರು  ವಂಥ ಯಾವುದೇ ವಿದ್ವಾಂಸ ಅಥವಾ ವ್ಯಕ್ತಿಗೆ ಎನ್‌ಡಿಎ ಸರಕಾರದಡಿ ಕೆಲಸ ಮಾಡಲು ಆಗುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಹೇಳಿದ್ದಾರೆ. ಇನ್ನೊಂ ದೆಡೆ, ಕಾಂಗ್ರೆಸ್‌ ವಕ್ತಾರ ರಣ ದೀಪ್‌ ಸುಜೇìವಾಲಾ ಮಾತನಾಡಿ, ಎನ್‌  ಡಿಎ ಸರಕಾರವು ಮತ್ತೂಂದು ಸ್ವಾಯತ್ತ ಸಂಸ್ಥೆಗೆ ಕಳಂಕ ತಂದಿದೆ. ಪಟೇಲ್‌ ರಾಜೀನಾಮೆಯು ಆರ್‌ಬಿಐನ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೇಂದ್ರ ಸರಕಾರದ ಪ್ರಯತ್ನದ ಫ‌ಲ ಎಂದು ಟೀಕಿಸಿದ್ದಾರೆ.

ಏತನ್ಮಧ್ಯೆ. ಆರ್‌ಬಿಐ ಗವರ್ನರ್‌ ಹಾಗೂ ಉಪಗವರ್ನರ್‌ ಆಗಿ ಊರ್ಜಿತ್‌ ಪಟೇಲ್‌ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸರಕಾರ ಶ್ಲಾ ಸುತ್ತದೆ. ಅವರೊಂದಿಗಿನ ಒಡನಾಟದಿಂದಾಗಿ ನಾನು ಬಹಳಷ್ಟು ಉತ್ತಮ ವಿಚಾರಗಳನ್ನು ಕಲಿತಿದ್ದೇನೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಟ್ವೀಟ್‌ ಮಾಡಿದ್ದಾರೆ.

ವಿರಳ್‌ ಆಚಾರ್ಯ ರಾಜೀನಾಮೆ ನೀಡಿಲ್ಲ
ಆರ್‌ಬಿಐ ಗವರ್ನರ್‌ ಸ್ಥಾನಕ್ಕೆ ಊರ್ಜಿತ್‌ ಪಟೇಲ್‌ ರಾಜೀನಾಮೆ ನೀಡಿದ ಕ್ಷಣದಲ್ಲಿಯೇ ಡೆಪ್ಯುಟಿ ಗವರ್ನರ್‌ ವಿರಳ್‌ ಆಚಾರ್ಯ ಅವರೂ ಹುದ್ದೆ ತ್ಯಜಿಸಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್‌ಬಿಐ ವಕ್ತಾರರು, “ಇದೊಂದು ಆಧಾರ ರಹಿತ ಸುದ್ದಿ’ ಎಂದು ಹೇಳಿದ್ದಾರೆ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದಾರೆ.

Advertisement

ಊರ್ಜಿತ್‌ ಪಟೇಲ್‌ ಅವರ ರಾಜೀನಾಮೆಯಿಂದ ಅಚ್ಚರಿ ಹಾಗೂ ಆಘಾತವಾಗಿದೆ. ಇದೊಂದು ದೊಡ್ಡ ಹಿನ್ನಡೆ. ಅವರನ್ನು ನಾವು ತುಂಬಾ ಮಿಸ್‌ ಮಾಡಿಕೊಳ್ಳುತ್ತೇವೆ.
ಎಸ್‌. ಗುರುಮೂರ್ತಿ, 
ಆರ್‌ಬಿಐ ಸ್ವತಂತ್ರ ನಿರ್ದೇಶಕ

ದೇಶದ ಪ್ರಗತಿ ಅಥವಾ ಸುಸ್ಥಿರ ಅಭಿವೃದ್ಧಿಗೆ ಸಂಸ್ಥೆಗಳ ಬಲಿಷ್ಠತೆಯು ಅತ್ಯಂತ ಮುಖ್ಯ. ಹಾಗಾಗಿ ಊರ್ಜಿತ್‌ ಪಟೇಲ್‌ರ ರಾಜೀನಾಮೆಯು ಪ್ರತಿಯೊಬ್ಬ ಭಾರತೀಯನೂ ಕಳವಳ ಪಡುವಂಥ ವಿಷಯ.
ರಘುರಾಂ ರಾಜನ್‌,  
ಆರ್‌ಬಿಐ ಮಾಜಿ ಗವರ್ನರ್‌

Advertisement

Udayavani is now on Telegram. Click here to join our channel and stay updated with the latest news.

Next