Advertisement

ಸೂಚ್ಯಂಕ ಚೇತರಿಸಲು ಆರ್‌ಬಿಐ ನೆರವು

01:25 AM Oct 09, 2021 | |

ಮುಂಬಯಿ/ಹೊಸದಿಲ್ಲಿ: ಸಾಲದ ಮೇಲಿನ ಬಡ್ಡಿ ದರವನ್ನು ಆರ್‌ಬಿಐ ಯಥಾಸ್ಥಿತಿಯಲ್ಲಿ ಇರಿಸುವ ಬಗ್ಗೆ ನಿರ್ಧಾರ ಮಾಡಿದ್ದು ಬಾಂಬೆ ಷೇರುಪೇಟೆಗೆ ಉತ್ಸಾಹ ತಂದುಕೊಟ್ಟಿತು. ಅದೇ ಹುರುಪಿನಲ್ಲಿ ಸೂಚ್ಯಂಕ 381.23 ಪಾಯಿಂಟ್ಸ್‌ ಗಳಷ್ಟು ಏರಿಕೆಯಾಗಿ, ದಿನಾಂತ್ಯಕ್ಕೆ 60,059.06 ರಲ್ಲಿ ಮುಕ್ತಾಯವಾಯಿತು.

Advertisement

ಹೀಗಾಗಿ ಮತ್ತೆ ಸೂಚ್ಯಂಕ 60 ಸಾವಿರದ ಗಡಿ ಯನ್ನು ದಾಟಲು ನೆರವಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳು ಶೇ.3.84 ರಷ್ಟು ಮಾರಾಟವಾದವು. ಇನ್ಫೋಸಿಸ್‌, ಟೆಕ್‌ ಮಹೀಂದ್ರಾ, ಎಚ್‌ಸಿಎಲ್‌ ಟೆಕ್‌, ಟಿಸಿಎಸ್‌, ಟಾಟಾ ಸ್ಟೀಲ್‌ ಮತ್ತು ಎಲ್‌ ಆ್ಯಂಡ್‌ ಟಿ ಷೇರು ಗಳೂ ಬಿಕರಿಯಾಗಿವೆ. ಬ್ಯಾಂಕಿಂಗ್‌ ಮತ್ತು ರಿಯಾಲಿಟಿ ಕಂಪೆನಿಗಳ ಷೇರುಗಳು ಕೂಡ ಕುಸಿದಿವೆ. ಒಟ್ಟಿನಲ್ಲಿ ವಾರಾಂತ್ಯದಲ್ಲಿ ಹೂಡಿಕೆ ದಾರರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಈ ವಾರದಲ್ಲಿ ಸೂಚ್ಯಂಕ 1,293. 48 ಪಾಯಿಂಟ್ಸ್‌, ನಿಫ್ಟಿ 363.15 ಪಾಯಿಂಟ್ಸ್‌ ಏರಿಕೆಯಾಗಿವೆ. ನಿಫ್ಟಿ ಸೂಚ್ಯಂಕ 104.85 ಪಾಯಿಂಟ್ಸ್‌ ಏರಿಕೆಯಾಗಿ, 17,895.20ರಲ್ಲಿ ಮುಕ್ತಾಯವಾಗಿದೆ. ಹೀಗಾಗಿ, ನಿಫ್ಟಿ ಸೂಚ್ಯಂಕ ಕೂಡ ದಾಖಲೆಯ ಏರಿಕೆ ಕಂಡಿದೆ.

ಚಿನ್ನ ಏರಿಕೆ; ಬೆಳ್ಳಿ ಇಳಿಕೆ: ಹೊಸದಿಲ್ಲಿ ಚಿನಿವಾರ ಮಾರುಕಟ್ಟೆಯಲ್ಲಿ ಪ್ರತೀ ಹತ್ತು ಗ್ರಾಂ ಚಿನ್ನದ ಬೆಲೆ 50 ರೂ. ಏರಿಕೆಯಾಗಿದ್ದು, 49, 959 ರೂ.ಗೆ ಮುಕ್ತಾಯವಾಗಿದೆ. ಪ್ರತೀ ಕೆ.ಜಿ. ಬೆಳ್ಳಿಯ ಬೆಲೆ 922 ರೂ. ಕುಸಿತವಾಗಿ 59,834 ರೂ. ಆಗಿದೆ.

20 ಪೈಸೆ ಕುಸಿತ: ಅಮೆರಿಕದ ಡಾಲರ್‌ ಎದುರು ರೂಪಾಯಿ 20 ಪೈಸೆ ಕುಸಿತ ಕಂಡಿದೆ. ಹೀಗಾಗಿ ದಿನಾಂತ್ಯಕ್ಕೆ 74.99 ರೂ.ಗಳಿಗೆ ವಹಿವಾಟು ಮುಕ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next