Advertisement

ಸಕ್ಕರೆ ಖಾತೆ ಮಾತ್ರ ನೀಡಿರುವುದಕ್ಕೆ ತಿಮ್ಮಾಪುರ್‌ ಅಸಮಾಧಾನ

01:00 AM Jan 04, 2019 | Team Udayavani |

ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಆರ್‌.ಬಿ.ತಿಮ್ಮಾಪುರ್‌ ಅಸಮಾಧಾನಗೊಂಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಸಕ್ಕರೆ, ಒಳನಾಡು ಹಾಗೂ ಬಂದರು ಖಾತೆ ನೀಡಲು ಸೂಚನೆ ನೀಡಿದ್ದರೂ ರಾಜಭವನಕ್ಕೆ ಕಳುಹಿಸಿರುವ ಪಟ್ಟಿಯಲ್ಲಿ ಸಕ್ಕರೆ ಖಾತೆ ನಮೂದಿಸಿರುವ ಬಗ್ಗೆ ತಮ್ಮ ಆಪ್ತರ ಬಳಿ ಬೇಸರ ಹೊರಹಾಕಿದ್ದಾರೆ.

Advertisement

ಒಳನಾಡು ಮತ್ತು ಬಂದರು ಲೋಕೋಪಯೋಗಿ ಖಾತೆ ಅಡಿಯಲ್ಲಿ ಬರಲಿದ್ದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಒಳನಾಡು ಹಾಗೂ ಬಂದರು ಬಿಟ್ಟುಕೊಡಲು ಒಪ್ಪಿಲ್ಲ. ಹೀಗಾಗಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ರಾಜಭವನಕ್ಕೆ ಪಟ್ಟಿ ಕಳುಹಿಸುವಾಗ ತಿಮ್ಮಾಪುರ್‌ ಅವರಿಗೆ ಸಕ್ಕರೆ ಖಾತೆ ಮಾತ್ರ ಹಂಚಿಕೆ ಮಾಡಿ ಕಳುಹಿಸಿದ್ದರು ಎಂದು ಹೇಳಲಾಗಿದೆ.

ಒಪ್ಪಂದದ ಪ್ರಕಾರ ಬಂದರು ಮತ್ತು ಒಳನಾಡು ಜಲ ಸಾರಿಗೆ ಕಾಂಗ್ರೆಸ್‌ ವ್ಯಾಪ್ತಿಗೆ ನೀಡಲಾಗಿದ್ದು, ರಮೇಶ್‌ ಜಾರಕಿಹೊಳಿ ಪೌರಾಡಳಿತ ಸಚಿವರಾಗಿದ್ದ ಅವರಿಗೆ ಹೆಚ್ಚುವರಿಯಾಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ನೀಡಲಾಗಿತ್ತು. ಆದರೆ, ಈಗ ಆ ಖಾತೆ ಜೆಡಿಎಸ್‌ ಬಳಿಯೇ ಉಳಿಸಿಕೊಂಡಂತಾಗಿದೆ.

ಈ ಕುರಿತು  ಉದಯವಾಣಿ ಜತೆ ಮಾತನಾಡಿದ ಆರ್‌.ಬಿ.ತಿಮ್ಮಾಪುರ್‌, ಹೈಕಮಾಂಡ್‌ ಕಳುಹಿಸಿರುವ ಪಟ್ಟಿಯಲ್ಲಿ ಸಕ್ಕರೆ ಖಾತೆ ಜೊತೆಗೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಖಾತೆ ಇತ್ತು. ಈಗ ರಾಜ್ಯಪಾಲರ ಆದೇಶದಲ್ಲಿ ಸಕ್ಕರೆ ಖಾತೆ ಮಾತ್ರ ನೀಡಲಾಗಿದೆ.  ಈ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತರಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next