Advertisement

ಮೂಲ ಸೌಕರ್ಯವಿಲ್ಲದೆ ಐಟಿ ಕ್ಷೇತ್ರಕ್ಕೆ ಹಿನ್ನಡೆ: ಪ್ರಸಾದ್‌

06:25 AM May 08, 2018 | |

ಬೆಂಗಳೂರು:  ರಾಜ್ಯ ಕಾಂಗ್ರೆಸ್‌ ಸರಕಾರ ಐದು ವರ್ಷಗಳ ಆಡಳಿತದಲ್ಲಿ ನಗರದಲ್ಲಿ ಸೂಕ್ತ ಮೂಲ ಸೌಕರ್ಯ ಕಲ್ಪಿಸದ ಕಾರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ವರ್ಚಸ್ಸು ಕುಂದಿದೆ ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ದೂರಿದರು.

Advertisement

ದೇಶದ ಐಟಿಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸುವ ಕಾರ್ಯದಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ. ನಗರದ ಕೆರೆಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿವೆ. ಮಾಲಿನ್ಯ ಮೇರೆ ಮೀರಿದೆ. ಹಾಗಾಗಿ ಐಟಿ ಕ್ಷೇತ್ರದ ಹೊಸ ಸಂಶೋಧನೆಗಳನ್ನು ಕೆರೆಗಳಲ್ಲಿ ಕಾಣುವಂತಾಗಿದೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next