Advertisement

ಸಚಿವ ರವಿಶಂಕರ್‌ ಪ್ರಸಾದ್‌ ವಿರುದ್ಧ ಬಿಜೆಪಿಯವರಿಂದಲೇ ಘೋಷಣೆ

09:18 AM Mar 29, 2019 | Team Udayavani |

ಪಟ್ನಾ : ಬಾಲಿವುಡ್‌ ಹಿರಿಯ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ಪಟ್ನಾ ಸಾಹಿಬ್‌ ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ರವಿ ಶಂಕರ್‌ ಪ್ರಸಾದ್‌ ಅವರಿಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರ ಒಂದು ಗುಂಪು ಪ್ರಸಾದ್‌ ವಿರುದ್ಧ ಘೋಷಣೆ ಕೂಗಿ ಪಕ್ಷದ ಹೈಕಮಾಂಡ್‌ ಗೆ ಬಹಿರಂಗವಾಗಿ ತೀವ್ರ ಇರಿಸು ಮುರಿಸು ಉಂಟುಮಾಡಿತು.

Advertisement

ಪಟ್ನಾ ಸಾಹಿಬ್‌ ಕ್ಷೇತ್ರಕ್ಕೆ ಆರ್‌ ಕೆ ಸಿನ್ಹಾ ಅವರು ಬಿಜೆಪಿ ಅಭ್ಯರ್ಥಿ ಆಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಬೆಂಬಲಿಗರಿಗೆ ಈ ಸೀಟು ಈಗ ರವಿ ಶಂಕರ್‌ ಪ್ರಸಾದ್‌ ಪಾಲಾಗಿರುವುದು ತೀವ್ರ ನಿರಾಶೆ, ಹತಾಶೆಗೆ ಕಾರಣವಾಗಿದೆ.

ಅಂತೆಯೇ ಇಲ್ಲಿನ ವಿಮಾನ ನಿಲ್ದಾಣದಲ್ಲಿ ರವಿಶಂಕರ್‌ ಪ್ರಸಾದ್‌ ಅವರು ಬಂದಿಳಿಯುತ್ತಿದ್ದಂತೆಯೇ ಸಿನ್ಹಾ ಅವರ ಬೆಂಬಲಿಗರು ಪ್ರಸಾದ್‌ ವಿರುದ್ಧ ಘೋಷಣೆ ಕೂಗಿದರು.

ಪಟ್ನಾ ಸಾಹಿಬ್‌ ಕ್ಷೇತ್ರವನ್ನು ಹಿಂದಿನಿಂದಲೂ ಪ್ರತಿನಿಧಿಸಿಕೊಂಡು ಬಂದಿದ್ದ ಬಾಲಿವುಡ್‌ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ಪಕ್ಷದಲ್ಲಿ ತನಗೆ ಸೂಕ್ತ ಉನ್ನತ ಸ್ಥಾನಮಾನ ದೊರಕದಿದ್ದ ಕಾರಣ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಲೇ ಬಂದು ಪಕ್ಷಕ್ಕೆ ತೀವ್ರ ವಿವಾದ, ಮುಜುಗರ, ಇರಿಸು ಮುರಿಸಿಗೆ ಕಾರಣವಾಗಿದ್ದರು.

ಹಾಗಾಗಿ ಅವರಿಗೆ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಕೊಡಲಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next