Advertisement

ಬೆಂಗಳೂರು: ಮುಂಬಯಿಯಲ್ಲಿ ದಾಖಲಾಗಿರುವ ಹಲವು ಕೊಲೆ, ದರೋಡೆ, ಪ್ರಾಣ ಬೆದರಿಕೆ ಪ್ರಕರಣಗಳ ಸಂಬಂಧ ಭೂಗತ ಪಾತಕಿ ರವಿ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಾಡಿ ವಾರೆಂಟ್‌ ಮೂಲಕ 15 ದಿನಗಳಿಗೆ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ರವಿ ಪೂಜಾರಿ ವಿರುದ್ಧ ಮುಂಬಯಿಯಲ್ಲಿ ಸುಮಾರು 25ಕ್ಕೂ ಅಧಿಕ ಪ್ರಕರಣಗಳಿವೆ.

ಫೆ.18ರಂದು ಕೇರಳದ ಬ್ಯೂಟಿ ಪಾರ್ಲರ್‌ನಲ್ಲಿ ಮಹಿಳೆಯೊಬ್ಬರ ಹತ್ಯೆಗೈದ ಪ್ರಕರಣ ಸಂಬಂಧ ಭೂಗತ ಪಾತಕಿ ರವಿಪೂಜಾರಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಔಪಚಾರಿಕವಾಗಿ ಐದು ದಿನಗಳ ಕಾಲ ಬಂಧಿಸಿ ವಿಚಾರಣೆ ನಡೆಸಲು ಎರ್ನಾಕುಲಂನ ಸಿಸಿಬಿ ಪೊಲೀಸರಿಗೆ ನಗರದ ಸೆಷನ್ಸ್‌ ನ್ಯಾಯಾಲಯ ಅನುಮತಿ ನೀಡಿತ್ತು. ಈ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸರು ರವಿ ಪೂಜಾರಿಯನ್ನು ಕರೆದೊಯ್ದಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಆನ್ ಲೈನ್ ದೋಖಾ …ಊಟ ಆರ್ಡರ್ ಮಾಡಿದವನ ಮನೆಗೆ ಬಂತು ಮೂತ್ರದ ಬಾಟಲ್  

Advertisement

Udayavani is now on Telegram. Click here to join our channel and stay updated with the latest news.

Next