Advertisement

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ

12:49 PM Jan 16, 2021 | Team Udayavani |

ಕಟಪಾಡಿ: ಶ್ರೀ ಕೃಷ್ಣಾ ಜನ್ಮಾಷ್ಟಮಿಯಂದು ವೇಷಧಾರಿಯಾಗಿ ಸಂಗ್ರಹಿಸಿದ ಹಣವನ್ನು ಬಡ ಅಶಕ್ತ, ಅನಾರೋಗ್ಯಪೀಡಿತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಕಳೆದ 5 ವರ್ಷದಿಂದ ನೀಡುತ್ತಾ ಬಂದಿರುವ ರವಿ ಕಟಪಾಡಿ, ಕೌನ್ ಬನೇಗಾ ಕರೋಡ್ ಪತಿ  ಕಾರ್ಯಕ್ರಮದಲ್ಲಿ 12.5 ಲಕ್ಷ ರೂಗಳನ್ನು ಗೆದ್ದು ಬಡ ಮಕ್ಕಳ ಆಶಾಕಿರಣವಾಗಿದ್ದಾರೆ.

Advertisement

ಶ್ರೇಷ್ಠ ಕಲಾವಿದ ಅಮಿತಾಬ್ ಬಚ್ಚನ್, ಅನುಪಮ್ ಖೇರ್ ಅವರ ಜೊತೆ ಕಳೆದ ಕ್ಷಣಗಳು ಜೀವನದ ಅತ್ಯಮೂಲ್ಯ ಕ್ಷಣಗಳು ಎನ್ನುವ ರವಿಕಟಪಾಡಿ, ಆ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವುದೇ ಕೋಟಿ ರೂ. ಗಳಿಗೆ ಸಮ ಎಂದು ತನ್ನ ಸಂತಸವನ್ನು ಉದಯವಾಣಿಯೊಂದಿಗೆ ಹಂಚಿಕೊಂಡರು.

ನಟ ಅಮಿತಾಬ್ ಬಚ್ಚನ್ ನನ್ನ ಜೊತೆ ಮಾತನಾಡಿದಲ್ಲದೆ ಅವರ ಬಾಯಿಂದ ‘ಉಡುಪಿ ಬೊಕ್ಕ ಕುಡ್ಲದ ಜನಕುಲೇಗ್ ನಮಸ್ಕಾರ’ ಎಂದು ತುಳು ಭಾಷೆಯಲ್ಲಿ ನನ್ನೊಂದಿಗೆ ಸಂವಾದ ನಡೆಸಿದ್ದು ನನ್ನ ನಾಡಿನ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ರವಿಕಟಪಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಜಗತ್ತಿನ ಅತೀ ದೊಡ್ಡ ಕೋವಿಡ್ ಲಸಿಕೆ ಅಭಿಯಾನಕ್ಕೆ ಭಾರತದಲ್ಲಿ ಚಾಲನೆ

Advertisement

ಇದನ್ನೂ ಓದಿ:  ಭಾರತದಲ್ಲಿ ಬಡವರಿಗೂ ಕೈಗೆಟುಕುವ ದರದಲ್ಲಿ ವ್ಯಾಕ್ಸಿನ್ ಲಭ್ಯ: ಕೆ.ಎಸ್.ಈಶ್ವರಪ್ಪ

ಶುಕ್ರವಾರ (ಜ.15) ರಾತ್ರಿ ಪ್ರಸಾರವಾದ ಬಾಲಿವುಡ್‌ನ ಬಾದ್‌ ಶಾ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಕಾರ್ಯಕ್ರಮದಲ್ಲಿ ರವಿ ಕಟಪಾಡಿ ಹಾಗೂ ಅಂಬಾ ಬೆಹಾನ್ ಜಂಟಿಯಾಗಿ 25 ಲಕ್ಷ ರೂ. ಮೊತ್ತವನ್ನು ಗೆದ್ದಿದ್ದಾರೆ. ಇದರಿಂದ ಬಂದ ಹಣವನ್ನು ಸಮಾಜ ಕಾರ್ಯಕ್ಕೆ ಬಳಸುವುದಾಗಿ ರವಿ ಕಟಪಾಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next