Advertisement

ರವಿ ಕಾರಂತ್‌, ಆಲ್ವಿನ್‌ ಅಂದಾದ್ರೆಗೆ ಪ್ರಶಸ್ತಿ ಪ್ರದಾನ

01:00 AM Mar 07, 2019 | Team Udayavani |

ಕೋಟ: ಡಾ| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕಾರಂತ ಟ್ರಸ್ಟ್‌  ಉಡುಪಿ, ಕೋಟತಟ್ಟು ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ  ರಂಗನಟ ದಿ| ಕೋಟ ಮಂಜುನಾಥ ಸ್ಮಾರಕ ಪ್ರಶಸ್ತಿಯನ್ನು ಗಾಯಕ-ಸಂಗೀತ ನಿರ್ದೇಶಕ ರವಿ ಕಾರಂತ್‌ ಹಾಗೂ ನಟ-ನಿರ್ದೇಶಕ ಆಲ್ವಿನ್‌ ಅಂದ್ರಾದೆ ಅವರಿಗೆ ಕಾರಂತ ಥೀಮ್‌ ಪಾರ್ಕ್‌ ಕೋಟದಲ್ಲಿ ಇತ್ತೀಚೆಗೆ ಪ್ರದಾನಿಸಿ ಗೌರವಿಸಲಾಯಿತು.

Advertisement

ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ ಮಣೂರು ಉದ್ಘಾಟಿಸಿ, ಕಲೆ ಈ ಮಣ್ಣಿನ ಜೀವಾಳ. ಅದೇ ರೀತಿ ಕಲೆಗೆ ಜೀವತುಂಬುವ ಕಲಾವಿದರಿಗೆ ಗೌರವ ಸಲ್ಲಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದರು.

ಪ್ರಶಸ್ತಿ ಸ್ವೀಕರಿಸಿದ ರವಿ ಕಾರಂತ್‌ ಮಾತನಾಡಿ, ಈ ಪುರಸ್ಕಾರದಿಂದ ಜವಾಬ್ದಾರಿ ಹೆಚ್ಚಾಗಿದೆ ಎಂದರು ಹಾಗೂ ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಆಲ್ವಿನ್‌ ಅಂದ್ರಾದೆ ಮಾತನಾಡಿ, ರಂಗಭೂಮಿ ನಮ್ಮ ಬದುಕಿನ ದಾರಿದೀಪಗಳಾಗಿದ್ದು ಅದರಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಾಗ ಉನ್ನತಿ ಸಾಧ್ಯ ಎಂದರು.

ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ, ಉದ್ಯಮಿ ಸುಬ್ರಾಯ್‌ ಆಚಾರ್‌, ಯಕ್ಷಸೌರಭ ಹಿರೇ ಮಹಾಲಿ ಂಗೇಶ್ವರ ಕಲಾರಂಗದ ಹರೀಶ್‌ ದೇವಾಡಿಗ, ರಾಘವೇಂದ್ರ ಶೆಟ್ಟಿ, ಸದಸ್ಯ ವಾಸು ಪೂಜಾರಿ ಉಪಸ್ಥಿತರಿದ್ದರು.ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ ಸ್ವಾಗತಿಸಿ, ಟ್ರಸ್ಟಿ ಸತೀಶ್‌ ವಡ್ಡರ್ಸೆ ನಿರೂಪಿಸಿ, ಕಾರಂತ ಥೀಮ್‌ ಪಾರ್ಕ್‌ ಮೇಲ್ವಿಚಾರಕ ಪ್ರಶಾಂತ್‌ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next