Advertisement

ರವೀನಾ ಆದ ರವೀಂದ್ರ : ಶಿಕ್ಷಣದಲ್ಲಿ ಗರಿಮೆಯ ಸಾಧನೆ

12:30 AM Feb 05, 2019 | Team Udayavani |

ಕಾಸರಗೋಡು: ತತ್ಸಮಾನ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ತೇರ್ಗಡೆಯಾದ ಮಂಗಳಮುಖೀ ರವೀನಾ ಗರಿಮೆ ತಂದಿದ್ದಾರೆ. ಸಾಕ್ಷರತಾ ಮಿಷನ್‌ ಹೊಸದುರ್ಗ ಕೇಂದ್ರದಲ್ಲಿ ಕಳೆದ ವರ್ಷ ಹತ್ತನೇ ತರಗತಿ ತತ್ಸಮಾನ ಪರೀಕ್ಷೆ ಬರೆದ 44 ಮಂದಿಯಲ್ಲಿ ಒಬ್ಬರಾದ ನೀಲೇಶ್ವರ ನಿವಾಸಿ ರವೀನಾ ಅವರು ತಮ್ಮ ವಿಶೇಷತೆಗಳೊಂದಿಗೆ ನಮ್ಮಗಮನ ಸೆಳೆಯುತ್ತಾರೆ. ತತ್ಸಮಾನ ಪರೀಕ್ಷೆ ಬರೆದವರಲ್ಲಿ ಏಕೈಕ ಮಂಗಳಮುಖೀ ಇವರಾಗಿದ್ದಾರೆ. ಇವರು ಬರೆದಿರುವ ಎಲ್ಲ ವಿಷಯಗಳಲ್ಲೂ ಅತ್ಯುತ್ತಮ ಅಂಕಗಳಿಸಿ ಪ್ಲಸ್‌-ವನ್‌ಗಿರುವ ಅರ್ಹತೆ ಪಡೆದಿದ್ದಾರೆ. ಹ್ಯೂಮಾನಿಟಿಸ್‌ ಇವರ ಆಯ್ಕೆಯ ವಿಷಯವಾಗಿದೆ.

Advertisement

40 ವರ್ಷಗಳಿಗೆ ಹಿಂದೆ ಹತ್ತನೇ ತರಗತಿಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ರವೀನಾ ಅವರು ಮಂಗಳಮುಖೀಯಾಗಿರಲಿಲ್ಲ. ಸಹಪಾಠಿಗಳಿಗೆ ಇವರು ರವೀಂದ್ರ ಆಗಿದ್ದರು. ಉಳಿದವರ ಮುಂದೆ ನಿಜಾಂಶ ಪ್ರಕಟಿಸಲಾಗದೆ ಏಕಾಂಗಿತನವನ್ನು ಅನುಭವಿಸುತ್ತಿದ್ದರು. ಇದರ ಫಲ ಪರೀಕ್ಷೆಯ ಮೇಲೂ ಅಂದು ಪ್ರಭಾವ ಬೀರಿತ್ತು. ಪರೀಕ್ಷೆಯಲ್ಲಿ ಸೋಲು ಅನುಭವಿಸಬೇಕಾಗಿ ಬಂದಿತ್ತು. ಈಗ ಎಲ್ಲ ಪರಿಸ್ಥಿಯೂ ಬದಲಾಗಿದ್ದು, ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕಗಳಿಸಿದ್ದಾರೆ.

ರವಿವಾರಗಳಲ್ಲಿ ಹೊಸದುರ್ಗ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ತತ್ಸಮಾನ ತರಗತಿ ನಡೆಯುತ್ತಿತ್ತು. ಅನೇಕ ಬಾರಿ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಸಮಾಜ ನೀತಿ ಇಲಾಖೆ ಕಚೇರಿಗೆ ತೆರಳಬೇಕಾಗಿ ಬಂದಿದ್ದ ಅವ ಧಿಯಲ್ಲಿ  ಸಾಕ್ಷರತಾ ಮಂಡಳಿ ರವೀನಾ ಅವರ ಗಮನಕ್ಕೆ ಬಂದಿತ್ತು. 

ಈ ಬಗ್ಗೆ ವಿಚಾರಿಸತೊಡಗಿದಾಗ ಅರ್ಧದಲ್ಲೇ ಮೊಟಕುಗೊಂಡ ಶಿಕ್ಷಣ ಪೂರ್ತಿಗೊಳಿಸುವ ಕುರಿತು ನಿರೀಕ್ಷೆ ಮೂಡಿತ್ತು. ಆದರೆ ಕಾರಣಾಂತರದಿಂದ ಕಳೆದ ವರ್ಷ ಕಲಿಕೆ ಪುನರಾರಂಭ ಸಾಧ್ಯವಾಗಿರಲಿಲ್ಲ.

ನೀಲೇಶ್ವರ ರಾಜಾಸ್‌ ಶಾಲೆಯಲ್ಲಿ ಹತ್ತನೇ ತರಗತಿ ವರೆಗೆ ಇವರು ಕಲಿಕೆ ನಡೆಸಿದ್ದರು. ಮೊದಲ ಯತ್ನದಲ್ಲಿ ಅನುತ್ತೀರ್ಣರಾದಾಗ ಮತ್ತೆ ಪರೀಕ್ಷೆ ಬರೆಯುವ ಮನಮಾಡಿದ್ದರೂ, ಮನೆಯಲ್ಲಿ ಪೂರಕ ವಾತಾವರಣ ಇರಲಿಲ್ಲ, ಮುಂದೆ ಅವಕಾಶಗಳು ಲಭಿಸಿದರೆ ಸ್ನಾತಕೋತ್ತರ ಪದವಿ ಪಡೆಯುವ ಬಯಕೆ ಇದೆ ಎಂದು ಅವರು ಬಯಕೆ ಮಂಡಿಸುತ್ತಾರೆ.

Advertisement

ಹಿಂದಿ ತಮ್ಮ ಇಷ್ಟ ವಿಷಯವಾಗಿದ್ದರೂ, ನಿರೀಕ್ಷಿಸಿದ ರೀತಿ ಅಂಕಗಳಿಕೆ ಸಾಧ್ಯವಾಗಿರಲಿಲ್ಲ. ಗಣಿತವೂ ಕಬ್ಬಿಣದ ಕಡಲೆಯಾಗಿರುವ ಕಾರಣ ಹ್ಯುಮಾನಿಟಿಸ್‌ ಆಯ್ಕೆ ಮಾಡಿರುವುದಾಗಿ ಅವರು ಹೇಳಿದರು. ಅನೇಕ ವರ್ಷಗಳ ಕಾಲ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ, ಇನ್ನಿತರ ದುಡಿಮೆ ನಡೆಸಿ ಬದುಕಿದರು. ಕೊಂಚ ಕಾಲ ಅಸ್ಸಾಂನಲ್ಲೂ ನೌಕರಿ ನಡೆಸಿದರು. ಈ ಮೂಲಕ ಹಿಂದಿ ಸುಲಲಿತವಾಯಿತು. ನಂತರ ಏಡ್ಸ್‌ ನಿಯಂತ್ರಣ ಸೊಸೈಟಿಯ ಹೆಲ್ತ್‌ ಲೈನ್‌ ಪ್ರಾಜೆಕ್ಟ್ ನಲ್ಲಿ ಮೂರು ವರ್ಷ ಕರಾರು ಮೇರೆಗೆ ನೌಕರಿ ನಡೆಸಿದರು. ಇದು ಬದುಕಿನಲ್ಲಿ ಅನೇಕ ತಿರುವುಗಳಿಗೆ ಕಾರಣವಾಯಿತು ಎಂದವರು ತಿಳಿಸುತ್ತಾರೆ.

ಉತ್ತಮ ಚಿತ್ರರಚನಾ ಕಲಾವಿದರೂ ಆಗಿರುವ ರವೀನಾ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಜೊತೆಗೆ ಅತ್ಯುತ್ತಮ ಮೇಕಪ್‌ ಕಲಾವಿದರೂ ಹೌದು.

65 ವರ್ಷ ಪ್ರಾಯದಲ್ಲೂ ಯುವಕರಂತೆ ಚಟುವಟಿಕೆ ನಡೆಸುತ್ತಿರುವ ರವೀನಾ ತತ್ಸಮಾನ ತರಗತಿಗಳಿಗೆ ಬರುತ್ತಿದ್ದಾಗ ಪುರುಷ ವೇಷದಲ್ಲೇ ಬರುತ್ತಿದ್ದರು. ಶಿಕ್ಷಣ ಪಡೆಯುವ ಮೂಲಕ ಹಿಂದೆ ಕಾಡುತ್ತಿದ್ದ ಏಕಾಕಿತನ ದೂರವಾಗಿದೆ ಎನ್ನುತ್ತಾರೆ ಅವರು.

ತನ್ನಂಥವರನ್ನು ಸಮಾಜದ ಪ್ರಧಾನವಾಹಿನಿಗೆ ಕರೆತರುವಲ್ಲಿ ರಾಜ್ಯ ಸರಕಾರದ ಇಂಥಾ ಯೋಜನೆಗಳು ಪೂರಕವಾಗಿದೆ ಎಂದು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next