Advertisement

ಕಾಳಸಂತೆಯಲ್ಲಿ ಪಡಿತರ ಮಾರಾಟ: ಕ್ರಮಕ್ಕೆ ಒತ್ತಾಯ

04:44 PM Sep 17, 2017 | |

ಸಿಂಧನೂರು: ಅಹಾರ ಇಲಾಖೆಯಲ್ಲಿನ ಪಡಿತರ ಹಾಗೂ ಮಧ್ಯಾಹ್ನದ ಬಿಸಿಊಟದ ಪಡಿತರಗಳನ್ನು ಕಾಳಸಂತೆಯಲ್ಲಿ ಸಾಗಣೆ ಮಾಡುವಾಗ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ದಲಿತ ಸಂಘರ್ಷ ಸಮಿತಿ (ಭೀಮಶಕ್ತಿ) ತಾಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಹುಸೇನಪ್ಪ ಸೂಲಂಗಿ, ಅಕ್ಕಿ, ತೊಗರಿ ಬೇಳೆ, ಎಣ್ಣೆ ಮತ್ತಿತರರ ಪಡಿತರಗಳನ್ನು ಅಹಾರ ಇಲಾಖೆ ಅಧಿಕಾರಿಗಳು ಕಾಳಸಂತೆಯಲ್ಲಿ ಅವ್ಯಾಹತವಾಗಿ ಮಾರಾಟ ಮಾಡುತ್ತಿದ್ದಾರೆ.

ವ್ಯವಸ್ಥಾಪಕ ಮಲ್ಲಿಕಾರ್ಜುನ, ಬಿಸಿಊಟ ಯೋಜನೆ ಸಹಾಯಕ ನಿರ್ದೇಶಕ ಶರಣಪ್ಪ, ಅಹಾರ ಸಾಗಾಟದ ಗುತ್ತಿಗೆದಾರ ಜಿ. ಗುನ್ನೇಶ್ವರ ಹಾಗೂ ಲಾರಿ ಚಾಲಕರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಇವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.  ಕಾರ್ಯಾಧ್ಯಕ್ಷ ಅಮರೇಶ ಗಿರಿಜಾಲಿ, ಉಪಾಧ್ಯಕ್ಷ ಜಾಕೋಬ್‌ ಧುಮತಿ, ಪದಾಧಿಕಾರಿಗಳಾದ ವೈ.ಅನಿಲಕುಮಾರ, ನಾಗರಾಜ, ಮಾರುತಿ, ಬಸವರಾಜ, ಆಲಂಭಾಷಾ, ಫಾರೂಖ್‌, ಯಶವಂತಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next