Advertisement

ಪಡಿತರಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ

03:08 PM Apr 12, 2020 | sudhir |

ಅಜೆಕಾರು: ಎರ್ಲಪಾಡಿಯ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ.

Advertisement

ಪ್ರತಿನಿತ್ಯ ಸರತಿ ಸಾಲಿನಲ್ಲಿ ಬಡವರು ಬಂದು ಸರಕಾರ ನೀಡುವ ಪಡಿತರಕ್ಕಾಗಿ ಗಂಟೆಗಟ್ಟಲೆ ಕಾದರೂ ಪಡಿತರ ಸಿಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಸರ್ವರ್‌ ಡೌನ್‌, ಒಟಿಪಿ ಸಮಸ್ಯೆ ಮೊದಲಾದ ಕಾರಣ ನೀಡಲಾಗುತ್ತಿದೆ. ಎಂದು ಸ್ಥಳೀಯರು ಹೇಳಿದ್ದಾರೆ. ಇತ್ತೀಚೆಗೆ ಬೆಳಗ್ಗೆ 9 ಗಂಟೆಯಿಂದ ಜನ ಸಾಮಾಜಿಕ ಅಂತರವಿಲ್ಲದೆ ಸರತಿಯಲ್ಲಿ ನಿಂತದ್ದನ್ನು ಕಂಡು ಸ್ಥಳೀಯರು ತತ್‌ಕ್ಷಣ ಪಡಿತರ ನೀಡುವಂತೆ ಆಗ್ರಹಿಸಿದರು.

ಅನಂತರ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಪ್ರಮೀಳಾ ನಾಯಕ್‌ ಮತ್ತು ಕಾರ್ಯದರ್ಶಿ ಸುನಂದಾ ಪಡಿತರ ಅಂಗಡಿಗೆ ಭೇಟಿ ನೀಡಿ ನ್ಯಾಯಬೆಲೆ ಅಂಗಡಿ ಮಾಲಕರಿಗೆ ಸೂಕ್ತ ಮಾಹಿತಿ ನೀಡಿ ತ್ವರಿತವಾಗಿ ಪಡಿತರ ವಿತರಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next