Advertisement

ಅಂಗಡಿಯಿಂದ ಪಡಿತರ ಅಕ್ಕಿ ವಶಕ್ಕೆ

12:53 AM May 02, 2019 | Sriram |

ಬಂಟ್ಟಾಳ: ಬಿ.ಮೂಡ ಗ್ರಾಮದ ಗೂಡಿನಬಳಿಯ ಅಂಗಡಿ ಯೊಂದರ ಮೇಲೆ ಬುಧವಾರ ದಾಳಿ ನಡೆಸಿದ ಆಹಾರ ಇಲಾಖೆ ನಿರೀಕ್ಷಕರು ಒಟ್ಟು 2,36, 950 ರೂ. ಮೌಲ್ಯದ ಪಡಿತರ ಅಕ್ಕಿ ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಗೂಡಿನ ಬಳಿ ನಿವಾಸಿಗಳಾದ ಅಬ್ದುಲ್‌ ಹಕೀಂ (60) ಮತ್ತು ಅಬ್ದುಲ್‌ ಸಲೀಂ (45)ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪಿಕಪ್‌ ವಾಹನದಲ್ಲಿ ತುಂಬಿಸಿದ್ದ 50 ಕೆ.ಜಿ. ತೂಕದ 60 ಚೀಲಗಳು,ಅಂಗಡಿಯಲ್ಲಿದ್ದ 50 ಕೆ.ಜಿ. ತೂಕದ 27 ಬ್ಯಾಗ್‌ಗಳು,48 ಕೆ.ಜಿ. ತೂಕದ 28 ಚೀಲಗಳು, ತೂಕದ ಯಂತ್ರ 2 ಸಹಿತ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ವಿರುದ್ಧ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿ ಕೇರಳಕ್ಕೆ ಸಾಗಿಸುತ್ತಿದ್ದ ಆರೋಪ ಹೊರಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next