Advertisement

ಕಾಪು ಬಂಟರ ಸಂಘದ ವತಿಯಿಂ1000 ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆಗೆ ಚಾಲನೆ

04:23 PM Apr 04, 2020 | Suhan S |

ಕಾಪು : ಕೋವಿಡ್ 19 ವೈರಸ್ ಆತಂಕದ ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾಗಿರುವ ಕಾಪು ಬಂಟರ ಸಂಘ ವ್ಯಾಪ್ತಿಯ 1000 ಕುಟುಂಬಗಳಿಗೆ ಪ್ರಕಾಶ್ ಶೆಟ್ಟಿ ಬಂಜಾರ ಇವರ ಸಹಕಾರದೊಂದಿಗೆ ಪಡಿತರ ಕಿಟ್ ವಿತರಿಸುವ ಯೋಜನೆಗೆ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮತ್ತು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅವರು ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಕಾಪು ಬಂಟರ ಸಂಘದ ಅಧ್ಯಕ್ಷ ವಾಸುದೇವ ಶೆಟ್ಟಿ ಮಾತನಾಡಿ, ಎಂ.ಆರ್.ಜಿ ಗ್ರೂಫ್ಸ್ ನ ಪ್ರಕಾಶ್ ಶೆಟ್ಟಿ ಬಂಜಾರ ಅವರು 200 ಕಿಟ್ ಗಳನ್ನು ನೀಡಿದ್ದಾರೆ. ಉಳಿದಂತೆ ಕಾಪು ಬಂಟರ ಸಂಘದ ಮೂಲಕ 12 ಗ್ರಾಮಗಳ ವ್ಯಾಪ್ತಿಗೆ ಬರುವ ಎಲ್ಲಾ ಸಮುದಾಯಗಳ 1000  ಕುಟುಂಬಗಳಿಗೆ ಪಡಿತರ ಸಾಮಾಗ್ರಿಗಳ ಕಿಟ್ ಅನ್ನು ವಿತರಿಸುವುದಾಗಿ ಯೋಜನೆ ರೂಪಿಸಲಾಗಿದೆ ಎಂದರು.

ಕಾಪು ಉಪ ತಹಶೀಲ್ದಾರ್ ಚಂದ್ರಹಾಸ ಬಂಗೇರ, ಕಂದಾಯ ನಿರೀಕ್ಷಕ ಕೆ. ರವಿಶಂಕರ್, ಸಮಾಜರತ್ನ ಕೆ. ಲೀಲಾಧರ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಬಾಲಕೃಷ್ಣ ಶೆಟ್ಟಿ ದೊರಕಳಗುತ್ತು, ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ನಿರ್ಮಲ್ ಕುಮಾರ್ ಹೆಗ್ಡೆ, ರಘುರಾಮ ಶೆಟ್ಟಿ, ಪುರಸಭೆ ಸದಸ್ಯ ಅನಿಲ್ ಕುಮಾರ್, ರವೀಂದ್ರ ಮಲ್ಲಾರು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next